ಕಿಲಾರ್ಲಹಳ್ಳಿ– ಕನ್ನಮೇಡಿ ರಸ್ತೆ ಕಾಮಗಾರಿ ಪೂರ್ಣಗೊಳಿಸಿ ಹಲವು ತಿಂಗಳು ಕಳೆದರೂ ವಿಶ್ವೇಶ್ವರಯ್ಯ ಜಲ ನಿಗಮ ತನಗೆ ಸೇರಬೇಕಾದ ₹50 ಲಕ್ಷ ಹಣ ಬಿಡುಗಡೆ ಮಾಡಿಲ್ಲ. ಕಾಮಗಾರಿ ಸರಿ ಇಲ್ಲ ಎಂದು ನಿಗಮದ ವ್ಯವಸ್ಥಾಪಕ ತನಿಖೆ ನಡೆಸಿದ್ದರು. ಕಾಮಗಾರಿ ಗುಣಮಟ್ಟ ಸರಿಯಾಗಿಯೇ ಇದೆ ಎಂದು ತನಿಖಾ ವರದಿ ಹೇಳಿದೆ. ಆದರೂ, ತಾಲ್ಲೂಕಿನವರೇ ಆದ ನಿಗಮದ ವ್ಯವಸ್ಥಾಪಕ ನಿರ್ದೇಶಕ ಸಣ್ಣ ಚಿತ್ತಯ್ಯ ಉದ್ದೇಶಪೂರ್ವಕವಾಗಿ ಹಣ ತಡೆ ಹಿಡಿದಿದ್ದಾರೆ ಎಂದು ಗುತ್ತಿಗೆದಾರ ಆರೋಪಿಸಿದ್ದಾರೆ.