ರಾಮಕೃಷ್ಣ ಸೇವಾಶ್ರಮದ ಸ್ವಾಮಿ ಜಪಾನಂದ ಜಿ ಪ್ರತಿಕ್ರಿಯಿಸಿ, ಸ್ಥಳೀಯ ಸಮಸ್ಯೆಗಳ ಬಗ್ಗೆ ಚರ್ಚಿಸಿ ಮೇವು ವಿತರಣೆ ಮುಂದುವರೆಸಲಾಗುವುದು. ಈಗಾಗಲೇ ತಾಲ್ಲೂಕು, ಚಳ್ಳಕೆರೆ ತಾಲ್ಲೂಕು, ಮೊಣಕಾಲ್ಮೂರು, ಪರಶುರಾಂಪುರ, ಕೂಡ್ಲಗಿ ಸೇರಿದಂತೆ ವಿವಿಧೆಡೆಯ 16 ಸಾವಿರ ಜಾನುವಾರುಗಳಿಗೆ ಕಳೆದ 5 ತಿಂಗಳುಗಳಿಂದ 850 ಟನ್ ಮೇವು ವಿತರಿಸಲಾಗಿದೆ. ಉತ್ತಮ ಮಳೆಯಾಗಿ ಮೇವು ಸಿಗುವವರೆಗೂ ಮೇವು ವಿತರಣೆ ಮುಂದುವರೆಸಲಾಗುವುದು ಎಂದು ಭರವಸೆ ನೀಡಿದರು.