ಗೀತಾ ಅವರ ಮನೆಗೆ ತೆರಳಿದ ವಂಚಕ ‘ನಾನು ಪೋಸ್ಟ್ ಮಾಸ್ಟರ್. ನಿಮಗೆ ಪೋಸ್ಟ್ ಆಫೀಸ್ನಲ್ಲಿ ಪಿಂಚಣಿ ಮಾಡಿಕೊಡಲು ಬಂದಿದ್ದೇನೆ. ಕೊರಳಿನಲ್ಲಿರುವ ಬಂಗಾರದ ಮಾಂಗಲ್ಯ ಸರ ತೆಗೆಯಬೇಕು. ಇಲ್ಲವಾದರೆ ನಿಮಗೆ ಪಿಂಚಣಿ ಮಾಡಿಕೊಡಲು ಕಷ್ಟವಾಗುತ್ತದೆ’ ಎಂದಿದ್ದಾನೆ. ಆಗ ಗೀತಾ ಕೊರಳಲಿದ್ದ ಮಾಂಗಲ್ಯ ಸರ ಹೊರತೆಗೆದು ಟೇಬಲ್ ಮೇಲೆ ಇಟ್ಟಿದ್ದಾರೆ. ಪೇಪರ್ ತನ್ನಿ ಎಂದು ಹೇಳಿದ ವಂಚಕ ಮಾಂಗಲ್ಯ ಸರ ಕದ್ದು ಪರಾರಿಯಾಗಿದ್ದಾನೆ.