ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಧುಗಿರಿ | ಪೋಸ್ಟ್ ಮಾಸ್ಟರ್ ಹೆಸರಲ್ಲಿ ವಂಚನೆ: ಮಾಂಗಲ್ಯ ಸರ ಕದ್ದು ಪರಾರಿ

Published 22 ಫೆಬ್ರುವರಿ 2024, 14:21 IST
Last Updated 22 ಫೆಬ್ರುವರಿ 2024, 14:21 IST
ಅಕ್ಷರ ಗಾತ್ರ

ಮಧುಗಿರಿ: ಪಟ್ಟಣದ ದೊಡ್ಡಪೇಟೆಯಲ್ಲಿ ಗುರುವಾರ ಪೋಸ್ಟ್ ಮಾಸ್ಟರ್ ಎಂದು ಹೇಳಿಕೊಂಡ ಯುವಕ ಗೀತಾ (58) ಅವರ ಕೊರಳಲಿದ್ದ 40 ಗ್ರಾಂ ಮಾಂಗಲ್ಯ ಸರ ಕದ್ದು ಪರಾರಿಯಾಗಿದ್ದಾನೆ.

ಗೀತಾ ಅವರ ಮನೆಗೆ ತೆರಳಿದ ವಂಚಕ ‘ನಾನು ಪೋಸ್ಟ್ ಮಾಸ್ಟರ್. ನಿಮಗೆ ಪೋಸ್ಟ್ ಆಫೀಸ್‌ನಲ್ಲಿ ಪಿಂಚಣಿ ಮಾಡಿಕೊಡಲು ಬಂದಿದ್ದೇನೆ. ಕೊರಳಿನಲ್ಲಿರುವ ಬಂಗಾರದ ಮಾಂಗಲ್ಯ ಸರ ತೆಗೆಯಬೇಕು. ಇಲ್ಲವಾದರೆ ನಿಮಗೆ ಪಿಂಚಣಿ ಮಾಡಿಕೊಡಲು ಕಷ್ಟವಾಗುತ್ತದೆ’ ಎಂದಿದ್ದಾನೆ. ಆಗ ಗೀತಾ ಕೊರಳಲಿದ್ದ ಮಾಂಗಲ್ಯ ಸರ ಹೊರತೆಗೆದು ಟೇಬಲ್ ಮೇಲೆ ಇಟ್ಟಿದ್ದಾರೆ. ಪೇಪರ್ ತನ್ನಿ ಎಂದು ಹೇಳಿದ ವಂಚಕ ಮಾಂಗಲ್ಯ ಸರ ಕದ್ದು ಪರಾರಿಯಾಗಿದ್ದಾನೆ. ‌

ಮಧುಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT