ಗೋಡೆ ಕೊರೆಯುವ ಶಬ್ದ ಕೇಳಿದ ಬ್ಯಾಂಕ್ ಸಮೀಪದ ಮನೆಯ ಲೋಹಿತಾಶ್ವ ಅನುಮಾನಗೊಂಡು ಹೊರಗೆ ಬಂದು ನೋಡಿದರು. ಬಳಿಕ ಗ್ರಾಮ ಪಂಚಾಯಿತಿ ಸದಸ್ಯ ವೆಂಕಟೇಶ್ ಅವರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದರು. ವೆಂಕಟೇಶ್ ಗ್ರಾಮಸ್ಥರಿಗೆ ಮಾಹಿತಿ ನೀಡಿದರು. ಗ್ರಾಮಸ್ಥರು ಗುಂಪುಗೂಡಿ ಬ್ಯಾಂಕ್ ಬಳಿಗೆ ಬಂದರು. ಆಗ ದರೋಡೆಕೋರರ ಗುಂಪು ಕಲ್ಲುಗಳನ್ನು ತೂರಿ ಗ್ರಾಮಸ್ಥರನ್ನು ಹಿಮ್ಮೆಟ್ಟಿಸಲು ಯತ್ನಿಸಿತು. ಆಗ, ಗ್ರಾಮಸ್ಥರು ಸಹ ಕಲ್ಲುಗಳನ್ನು ತೂರಿದರು.