<p><strong>ವೈ.ಎನ್.ಹೊಸಕೋಟೆ:</strong> ಸತತವಾಗಿ ಸುರಿಯುತ್ತಿರುವ ಉಬ್ಬೆ ಮಳೆಯಿಂದ ಬೆಳೆನಷ್ಟ ಅನುಭವಿಸುತ್ತಿರುವ ಬಯಲುಸೀಮೆಯ ರೈತರು ತಬ್ಬಿಬ್ಬಾಗಿದ್ದಾರೆ.</p>.<p>ಶೇಂಗಾಬಳ್ಳಿ ನೆಲದಲ್ಲೇ ಕೊಳೆಯುತ್ತಿದ್ದು, ದನಕರುಗಳಿಗೆ ಮೇಯಲು ಸಾಧ್ಯವಾಗದೆ ತಿಪ್ಪೆಗೆ ಹಾಕುವುದು ಅನಿವಾರ್ಯವಾಗಿದೆ.</p>.<p>‘ತಡವಾಗಿ ಬಿತ್ತನೆ ಮಾಡಿರುವ ಹೊಲಗಳಲ್ಲಿ ಶೇಂಗಾ ಗಿಡ ಹುಲುಸಾಗಿ ಬೆಳೆದಿದ್ದು, ಇಳುವರಿ ಮಾತ್ರ ಕಡಿಮೆ ಇದೆ. ಗಿಡಗಳಲ್ಲಿ ಅಲ್ಪಸ್ವಲ್ಪ ಇರುವ ಶೇಂಗಾ ಈಗಿನ ಮಳೆಯಿಂದಾಗಿ ಕೈಗೆ ಸಿಗುವ ಖಾತರಿ ಇಲ್ಲ’ ಎಂದು ರೈತ ಓಬಳೇಶ ಮತ್ತು ತಿಪ್ಪೇಸ್ವಾಮಿ ಆತಂಕ ವ್ಯಕ್ತಪಡಿಸುತ್ತಾರೆ.</p>.<p>ಇದಲ್ಲದೆ ಕೊಳವೆಬಾವಿಗಳ ನೀರಿನ ಸಹಾಯದಿಂದ ಬೆಳೆದಿರುವ ಟೊಮೆಟೊ, ಹತ್ತಿ, ಮೆಣಸಿನಕಾಯಿ ಇತ್ಯಾದಿ ಬೆಳೆಗಳನ್ನು ಮಳೆ ಕಾರಣದಿಂದ ಬಿಡಿಸಲಾಗುತ್ತಿಲ್ಲ.</p>.<p>‘ಟೊಮೆಟೊ ಗಿಡಗಳಲ್ಲಿ ಹಣ್ಣಾಗಿ ಕೊಳೆಯುತ್ತಿದೆ. ಹತ್ತಿ ಮೊಳಕೆಯೊಡೆದು ನಾರು ಕೊಳೆಯುತ್ತಿದೆ. ಫಸಲು ಕೈಗೆ ಸಿಗುತ್ತದೆ ಎಂಬ ಖುಷಿಯಲ್ಲಿದ್ದ ನಮಗೆ ಉಬ್ಬೆಮಳೆ ನಿರಾಸೆ ಮೂಡಿಸಿ ಸಂಕಷ್ಟ ತಂದೊಡ್ಡಿದೆ’ ಎನ್ನುತ್ತಾರೆ ಗ್ರಾಮದ ರೈತರಾದ ಎಚ್.ಕೆ.ಶ್ರೀನಿವಾಸ, ಹನುಮಂತರಾಯ ಮತ್ತು ಜಗನ್ನಾಥ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವೈ.ಎನ್.ಹೊಸಕೋಟೆ:</strong> ಸತತವಾಗಿ ಸುರಿಯುತ್ತಿರುವ ಉಬ್ಬೆ ಮಳೆಯಿಂದ ಬೆಳೆನಷ್ಟ ಅನುಭವಿಸುತ್ತಿರುವ ಬಯಲುಸೀಮೆಯ ರೈತರು ತಬ್ಬಿಬ್ಬಾಗಿದ್ದಾರೆ.</p>.<p>ಶೇಂಗಾಬಳ್ಳಿ ನೆಲದಲ್ಲೇ ಕೊಳೆಯುತ್ತಿದ್ದು, ದನಕರುಗಳಿಗೆ ಮೇಯಲು ಸಾಧ್ಯವಾಗದೆ ತಿಪ್ಪೆಗೆ ಹಾಕುವುದು ಅನಿವಾರ್ಯವಾಗಿದೆ.</p>.<p>‘ತಡವಾಗಿ ಬಿತ್ತನೆ ಮಾಡಿರುವ ಹೊಲಗಳಲ್ಲಿ ಶೇಂಗಾ ಗಿಡ ಹುಲುಸಾಗಿ ಬೆಳೆದಿದ್ದು, ಇಳುವರಿ ಮಾತ್ರ ಕಡಿಮೆ ಇದೆ. ಗಿಡಗಳಲ್ಲಿ ಅಲ್ಪಸ್ವಲ್ಪ ಇರುವ ಶೇಂಗಾ ಈಗಿನ ಮಳೆಯಿಂದಾಗಿ ಕೈಗೆ ಸಿಗುವ ಖಾತರಿ ಇಲ್ಲ’ ಎಂದು ರೈತ ಓಬಳೇಶ ಮತ್ತು ತಿಪ್ಪೇಸ್ವಾಮಿ ಆತಂಕ ವ್ಯಕ್ತಪಡಿಸುತ್ತಾರೆ.</p>.<p>ಇದಲ್ಲದೆ ಕೊಳವೆಬಾವಿಗಳ ನೀರಿನ ಸಹಾಯದಿಂದ ಬೆಳೆದಿರುವ ಟೊಮೆಟೊ, ಹತ್ತಿ, ಮೆಣಸಿನಕಾಯಿ ಇತ್ಯಾದಿ ಬೆಳೆಗಳನ್ನು ಮಳೆ ಕಾರಣದಿಂದ ಬಿಡಿಸಲಾಗುತ್ತಿಲ್ಲ.</p>.<p>‘ಟೊಮೆಟೊ ಗಿಡಗಳಲ್ಲಿ ಹಣ್ಣಾಗಿ ಕೊಳೆಯುತ್ತಿದೆ. ಹತ್ತಿ ಮೊಳಕೆಯೊಡೆದು ನಾರು ಕೊಳೆಯುತ್ತಿದೆ. ಫಸಲು ಕೈಗೆ ಸಿಗುತ್ತದೆ ಎಂಬ ಖುಷಿಯಲ್ಲಿದ್ದ ನಮಗೆ ಉಬ್ಬೆಮಳೆ ನಿರಾಸೆ ಮೂಡಿಸಿ ಸಂಕಷ್ಟ ತಂದೊಡ್ಡಿದೆ’ ಎನ್ನುತ್ತಾರೆ ಗ್ರಾಮದ ರೈತರಾದ ಎಚ್.ಕೆ.ಶ್ರೀನಿವಾಸ, ಹನುಮಂತರಾಯ ಮತ್ತು ಜಗನ್ನಾಥ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>