ಒಂದೆಡೆ ಸ್ಮಶಾನಕ್ಕೆ ನೀಡಿದ ಜಾಗವನ್ನು ಅಭಿವೃದ್ಧಿಪಡಿಸುತ್ತಿಲ್ಲ. ಮತ್ತೊಂದೆಡೆ ಪರ್ಯಾಯ ಜಾಗ ನೀಡಲು ಕ್ರಮ ಕೈಗೊಳ್ಳುತ್ತಿಲ್ಲ. ಸ್ಮಶಾನ ಸರ್ಕಾರಿ ದಾಖಲೆಗಳಿಗೆ ಸೀಮಿತವಾಗಿದೆ. ಹೋರಾಟ ಅನಿವಾರ್ಯವಾಗಿದೆ.
– ಎಚ್.ಎನ್.ನಟರಾಜು, ಗ್ರಾ.ಪಂ ಸದಸ್ಯ
ಮಠಕ್ಕೆ ಸೇರಿದ ಒಂದು ಎಕರೆ ಜಮೀನಿನಲ್ಲಿ ವೀರಶೈವ ಲಿಂಗಾಯತರ ಶವಸಂಸ್ಕಾರಕ್ಕೆ ನೀಡಲಾಗಿದೆ. ಸಾರ್ವಜನಿಕ ಸ್ಮಶಾನಕ್ಕೆ ಎರಡು ಎಕರೆ ಮಂಜೂರಾಗಿದೆ. ಅಧಿಕಾರಿಗಳು ಜನಪ್ರತಿನಿಧಿಗಳು ಗಮನಹರಿಸಬೇಕಿದೆ.
– ಸಿದ್ಧಗಂಗಾ ಶಿವಾನಂದ ಸ್ವಾಮೀಜಿ
ಹುಲಿಯೂರುದುರ್ಗದಲ್ಲಿ ಮುಸ್ಲಿಮರಿಗೆ ಮೂರು ಎಕರೆ ಸ್ಮಶಾನ ಭೂಮಿ ಇದೆ. ಅದರಲ್ಲಿಯೇ ಅಲ್ಪಭಾಗ ಹಿಂದೂಗಳಿಗೆ ಮಂಜೂರಾಗಿದೆ. ಬಳಕೆಗೆ ಗೊಂದಲಗಳಿರುವುದರಿಂದ ಯಾರು ಮುಂದೆ ಬರುತ್ತಿಲ್ಲ.
– ಅಲ್ಲಾಬಕಷ್, ತಾ.ಪಂ. ಮಾಜಿ ಸದಸ್ಯ
ವ್ಯಾಪಾರಕ್ಕಾಗಿ ಬಂದು ದುರ್ಗದಲ್ಲಿ ನೆಲಸಿದ್ದೇವೆ. ಸಂಬಂಧಿಗಳು ಮೃತಪಟ್ಟಾಗ ಸಾರ್ವಜನಿಕ ಸ್ಮಶಾನವಿಲ್ಲದ ಕಾರಣ ಗ್ರಾಮಸ್ಥರ ಮೊರೆಹೋಗಿ ಅವರ ಜಮೀನನಲ್ಲಿ ಅಂತ್ಯಕ್ರಿಯೆ ಮಾಡಿದ್ದೇವೆ. ಸಾರ್ವಜನಿಕ ಸ್ಮಶಾನದ ಅಗತ್ಯವಿದೆ.