ತುಮಕೂರು-ಕೊರಟಗೆರೆ ನಡುವಿನ ಅಕ್ಷಯ ಕಾಲೇಜು ಬಳಿ ನಿತ್ಯ ನೂರಾರು ವಿದ್ಯಾರ್ಥಿಗಳು ಬಸ್ಗಾಗಿ ಕಾದಿರುತ್ತಾರೆ. ಆಗೊಮ್ಮೆ, ಈಗೊಮ್ಮೆ ಬರುವ ಬಸ್ಗಳಲ್ಲಿ ಜೋತು ಬಿದ್ದು ಜನರು ಪ್ರಯಾಣಿಸುತ್ತಿದ್ದಾರೆ. ಕೆಲವು ಬಸ್ಗಳು ಇಲ್ಲಿ ನಿಲ್ಲಿಸದೆ ಹೋಗುತ್ತವೆ. ಇನ್ನು ಕೆಲ ಬಸ್ಗಳು ನಿಲ್ದಾಣ ಬಿಟ್ಟು ಮುಂದೆ ಹೋಗಿ ನಿಲ್ಲಿಸುವುದರಿಂದ ಓಡಿ ಹೋಗಿ ಬಸ್ ಹತ್ತುವ ಸಾಹಸವನ್ನು ವಿದ್ಯಾರ್ಥಿಗಳು ಮಾಡಬೇಕಿದೆ. ಈ ವೇಳೆ ಕೆಲವರು ಬಿದ್ದ ನಿದರ್ಶನಗಳೂ ಇವೆ.