ತಾಲ್ಲೂಕಿನ ಬೆಸ್ಕಾಂ ಎಇಇ ನಿವೃತ್ತರಾಗಿ ಹಲವು ತಿಂಗಳು ಕಳೆದಿವೆ. ಆದರೆ ಕಾಯಂ ಎಂಜಿನಿಯರ್ಗಳ ನೇಮಕ ಮಾಡಿಲ್ಲ. ಸದ್ಯ ಪ್ರಭಾರವಾಗಿ ತುಮಕೂರಿನಿಂದಲೇ ಎಂಜಿನಿಯರ್ ಅನ್ನು ಕಳುಹಿಸಿದ್ದರೂ, ಸ್ಥಳೀಯವಾಗಿ ಪರಿಚಯ ಇಲ್ಲದೆ ಇರುವುದರಿಂದ ಯಾವುದಕ್ಕೆ ಆದ್ಯತೆ ನೀಡಬೇಕು ಎನ್ನುವುದು ಗೊತ್ತಾಗದೆ ಪರಿತಪಿಸುವಂತೆ ಆಗುತ್ತಿದೆ. ತಾತ್ಕಾಲಿಕವಾಗಿ ಗುಬ್ಬಿಯಿಂದ ವರ್ಗಾವಣೆಗೊಂಡಿದ್ದ ಹಾಗೂ ಬೇರೆಡೆ ಹೋಗಿದ್ದ ಸಿಬ್ಬಂದಿಯನ್ನು ಕರೆಸಿಕೊಂಡು ತುರ್ತು ಕ್ರಮಕ್ಕೆ ಇಲಾಖೆ ಮುಂದಾಗಿದ್ದರೂ, ಸಾರ್ವಜನಿಕರ ಪರದಾಟ ತಪ್ಪಿಲ್ಲ.