ತುಮಕೂರು: ಕೇಂದ್ರ ಸರ್ಕಾರ ಪ್ರಾದೇಶಿಕ ಅಸಮಾನತೆ ತೋರುತ್ತಿದೆ. ರಾಮ ಮಂದಿರ ಸೇರಿದಂತೆ ಭವ್ಯ ಸ್ಮಾರಕ, ಇತರೆ ಮಂದಿರಗಳನ್ನು ಉತ್ತರ ಭಾರತದಲ್ಲಿ ನಿರ್ಮಿಸಿ, ದಕ್ಷಿಣ ಭಾರತವನ್ನು ನಿರ್ಲಕ್ಷಿಸುತ್ತಿದೆ ಎಂದು ತುರುವೇಕೆರೆ ತಾಲ್ಲೂಕಿನ ಡಿ.ಕಲ್ಕೆರೆಯ ಅಲ್ಲಮಪ್ರಭು ಮಠದ ತಿಪ್ಪೇರುದ್ರ ಸ್ವಾಮೀಜಿ ಇಲ್ಲಿ ಮಂಗಳವಾರ ಅಸಮಾಧಾನ ವ್ಯಕ್ತಪಡಿಸಿದರು.