ಇದೇ ಶಾಲೆ ಮುಂಬರುವ ದಿನಗಳಲ್ಲಿ ಮುಚ್ಚಿ ಹೋಗುವ ಸಾಧ್ಯತೆಯೂ ಇದೆ. ಮುಕ್ಕಾಲು ಶತಮಾನ ಇರುವ ಶಾಲೆಯನ್ನು ಉಳಿಸಿಕೊಳ್ಳಲು ಶಾಲಾಭಿವೃದ್ಧಿ ಸಮಿತಿ, ಪೋಷಕರು ಮತ್ತು ಶಿಕ್ಷಕರು ಎಲ್ಕೆಜಿ ಮತ್ತು ಯುಕೆಜಿ ತರಗತಿ ತೆರೆಯುವುದು ಅನಿವಾರ್ಯ. ಕನ್ನಡದೊಂದಿಗೆ ಇಂಗ್ಲಿಷ್ ಮಾಧ್ಯಮವನ್ನೂ ನೀಡುವುದು ಅಗತ್ಯ ಎಂದು ಶಂಕರ್ ತಿಳಿಸಿದ್ದಾರೆ.