ಶಾಸಕ ಜಿ.ಬಿ. ಜ್ಯೋತಿಗಣೇಶ್, ‘ನಗರದ ಬಿಜಿಎಸ್ ವೃತ್ತದಿಂದ ಯಾತ್ರೆ ಆರಂಭವಾಗಲಿದೆ. ಸಾವಿರಾರು ಸಂಖ್ಯೆಯ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಎಂ.ಜಿ ರಸ್ತೆ, ಕಾರ್ಯಪ್ಪ ರಸ್ತೆ, ಭದ್ರಮ್ಮ ಛತ್ರ ವೃತ್ತ, ರಾಧಾಕೃಷ್ಣ ರಸ್ತೆ, ಎಸ್.ಎಸ್. ಪುರಂ ರಸ್ತೆಯ ಮುಖಾಂತರ ಎಸ್ಐಟಿ ಮುಖ್ಯರಸ್ತೆಯಲ್ಲಿ ಸಾಗಿ ಎಸ್ಐಟಿ ಕಾಲೇಜು ಬಳಿ ಕೊನೆಗೊಳ್ಳಲಿದೆ. ಕಲಾ ತಂಡಗಳು ಯಾತ್ರೆಗೆ ಸಾಥ್ ನೀಡಲಿವೆ’ ಎಂದರು.