ತುಮಕೂರು: ಹೇಮಾವತಿ ನೀರು ಜಿಲ್ಲೆ ಹಾಗೂ ತಾಲ್ಲೂಕಿಗೆ ಸರಾಗವಾಗಿ ಹರಿಯುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ಹಾಗೂ ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ಅವರ ಸಹಕಾರ ಇದಕ್ಕಿದೆ. ಎಲ್ಲರ ಸಹಕಾರದಿಂದ ಶಿರಾಕ್ಕೆ ನೀರು ಮುಟ್ಟಿದೆ. ಕಳ್ಳಂಬೆಳ್ಳ, ಶಿರಾ ಕೆರೆ ತುಂಬಿಸಲಾಗುವುದು ಎಂದು ಶಾಸಕ ಬಿ.ಸತ್ಯನಾರಾಯಣ್ ಹೇಳಿದರು.