ಜಿಲ್ಲಾ ಕೊಳೆಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ಅಧ್ಯಕ್ಷ ಎ.ನರಸಿಂಹಮೂರ್ತಿ ಮಾತನಾಡಿ, ‘ ಕೊಳೆಗೇರಿಗಳ ಘೋಷಣೆಗೆ ಸಂಬಂಧಿಸಿದಂತೆ ನಗರದ 5 ಕೊಳೆಗೇರಿಗಳಿಗೆ ಪಾಲಿಕೆಯಿಂದ ನಿರಾಕ್ಷೇಪಣಾ ಪತ್ರದ ಅವಶ್ಯಕತೆ ಇದೆ. ದಾಖಲೆ ರಹಿತ ಕೊಳಚೆ ಪ್ರದೇಶಗಳಾದ ಎನ್.ಆರ್.ಕಾಲೊನಿ. ಹೆಳ್ಳಾರಬಂಡೆ, ಸಂಪಾದನೆಮಠ, ಎಸ್.ಎನ್. ಪಾಳ್ಯ, ಭಾರತಿನಗರ, ಗುಂಡ್ಲಮ್ಮನಗರ, ನಜರಾಬಾದ್, ಕುರಿಪಾಳ್ಯ, ಗಂಗಸಂದ್ರ ಮುಂತಾದ ಕೊಳೆಗೇರಿಗಳಿಗೆ ಪಾಲಿಕೆಯಿಂದ ಸರಳ ಖಾತೆಗಳನ್ನು ಮಾಡಬೇಕಿದೆ ಎಂದು ಆಗ್ರಹಿಸಿದರು.