ಭಾನುವಾರ ಭಕ್ತಾದಿಗಳು ಸೇರಿಕೊಂಡು ಶ್ರೀರಾಮ ನವಮಿ ಆಚರಣೆ ಮಾಡಿದ್ದರು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸೇರಿದ್ದು ಪ್ರಸಾದ, ಪಾನಕ, ಫಲಹಾರ ನೀಡಲಾಗಿತ್ತು. ಸೋಮವಾರ ಬೆಳಿಗ್ಗೆ ಪೂಜೆಗೆ ಬಂದಾಗ ದೇವಾಲಯದ ಒಳಗೆ ಇಟ್ಟಿಗೆ ಚೂರು ಬಿದ್ದಿದ್ದವು. ಬಾಗಿಲು ತೆಗೆದು ನೋಡಿದಾಗ ದುಷ್ಕರ್ಮಿಗಳು ಮೇಲ್ಭಾಗದಿಂದ ಇಳಿದು ಹುಂಡಿ ತೆಗೆದುಕೊಂಡು ಹೋಗಿದ್ದಾರೆ ಎಂದು ಅರ್ಚಕ ದರ್ಶನ್
ತಿಳಿಸಿದರು.