ಈ ಮೊದಲು ಗ್ರಾಮದಲ್ಲಿ ಬಸ್ಗಳು ವ್ಯವಸ್ಥಿತವಾಗಿ ನಿಲ್ಲುತ್ತಿದ್ದವು. ಆದರೆ ಮೇಲ್ಸೇತುವೆ ನಿರ್ಮಾಣದ ನಂತರ ಬಸ್ ಚಾಲಕರು ಸರ್ವಿಸ್ ರಸ್ತೆಯಲ್ಲಿ ಬರುವ ಬದಲಾಗಿ ಮೇಲ್ಸೇತುವೆ ಮೇಲೆ ಬಂದು ಗ್ರಾಮದ ಹೊರಭಾಗದಲ್ಲಿ ಪ್ರಯಾಣಿಕರನ್ನು ಇಳಿಸಿ ಹೋಗುತ್ತಿರುವುದರಿಂದ ತೊಂದರೆಯಾಗುತ್ತಿದೆ ಎಂದು ಪ್ರತಿಭಟನೆನಿರತರು ದೂರಿದರು.