ಸ್ಪರ್ಧೆಗಳ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿ, ‘ಏ. 21ರಂದು ನಾಗರಿಕರನ್ನು ಮತಗಟ್ಟೆಗೆ ಕರೆದು ಅವರಿಗೆ ಚುನಾವಣೆ, ಮತದಾನದ ಮಹತ್ವ ಕುರಿತು ಮನವರಿಕೆ ಮಾಡಿಕೊಡಲಾಗುತ್ತದೆ. 25ರಂದು ನಗರದ ಎಲ್ಲಾ 235 ಮತಗಟ್ಟೆಗಳಲ್ಲಿ ನನ್ನ ಮತಗಟ್ಟೆ ಸುಂದರ ಮತಗಟ್ಟೆ ಎಂಬ ಕಾರ್ಯಕ್ರಮದಡಿ ಮತಗಟ್ಟೆ ಸ್ವಚ್ಛಗೊಳಿಸಿ, ಆವರಣದಲ್ಲಿ ರಂಗೋಲಿ ಹಾಕಿ, ತೋರಣ ಕಟ್ಟಿ ಅಲಂಕರಿಸಲಾಗುವುದು’ ಎಂದು ಮಾಹಿತಿ ನೀಡಿದರು.