ಜಗ್ಗೇಶ್ ಶಾಸಕರಾಗಿದ್ದಾಗ ತಾಲ್ಲೂಕಿಗೆ ಅಗ್ನಿಶಾಮಕ ಠಾಣೆಗೆ ಮಂಜೂರಾತಿ ಸಿಕ್ಕಿತು. ಆದರೆ ಸ್ವಂತ ಕಟ್ಟಡವಿಲ್ಲದ ಕಾರಣ ಇಲ್ಲಿನ ಎಪಿಎಂಸಿ ಆವರಣದಲ್ಲಿನ 3 ಶೆಡ್ಗಳನ್ನು ಬಾಡಿಗೆ ಪಡೆದು ನಿರ್ವಹಿಸಲಾಗುತ್ತಿದೆ. ಸ್ವಂತ ಕಟ್ಟಡಕ್ಕಾಗಿ ತಾಲ್ಲೂಕು ಆಡಳಿತ ತಾವರೆಕೆರೆ ಬಳಿ 1.32 ಎಕರೆ ಭೂಮಿಯನ್ನು ಸೂಚಿಸಿತು. ಇದರಲ್ಲಿ ಅಗ್ನಿಶಾಮಕ ಠಾಣೆಗೆ ಮೀಸಲಿಟ್ಟ ಜಾಗವನ್ನು ಗ್ರಾಮಸ್ಥರ ಓಡಾಟದ ದಾರಿ ಮಾಡಿ ಸರ್ವೆ ಕಲ್ಲು, ಬೋರ್ಡ್ ಹಾಕಿದರು. ಕಟ್ಟಡ ನಿರ್ಮಾಣಕ್ಕೆ ಸರ್ಕಾರ ₹ 2.60 ಕೋಟಿ ಮಂಜೂರು ಮಾಡಿತು. ಆಗ ನಿಗದಿಪಡಿಸಿದ್ದ ಸ್ದಳದ ವಿಷಯದಲ್ಲಿ ಗೊಂದಲ ಶುರುವಾಯಿತು. ಉಪವಿಭಾಗಾಧಿಕಾರಿ ಶಿಲ್ಪಾ, ತಹಶೀಲ್ದಾರ್ ಎಂ. ಶಿವಲಿಂಗಮೂರ್ತಿ, ಶಾಸಕ ಎಂ.ಟಿ. ಕೃಷ್ಣಪ್ಪ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.