ಮಂಗಳೂರು ವಿಶ್ವವಿದ್ಯಾಲಯದ ಸೆನೆಟ್ ಸದಸ್ಯ ಅಮೃತ್ ಶೆಣೈ ಮಾತ ನಾಡಿ, ‘ರಂಗಭೂಮಿಯ ಈ ವರ್ಷದ ನಾಟಕದಲ್ಲಿ ಮಂಗಳಮುಖಿಯರ ಜೀವನದ ವೃತ್ತಾಂತವನ್ನು ತೋರಿಸುತ್ತಿರುವುದು ಶ್ಲಾಘನೀಯ. ತೃತೀಯ ಲಿಂಗಿಗಳ ಬಗ್ಗೆ ಹಿಂದೆ ತಾತ್ಸಾರದ ಮನೋಭಾವವಿತ್ತು. ಆದರೆ, ಈಗ ಜನರಲ್ಲಿ ಜಾಗೃತಿ ಮೂಡಿದೆ. ಅವರಿಗೆ ಸರ್ಕಾರ ಸಹ ಮತದಾನದ ಹಕ್ಕು, ವಿಶೇಷ ಸೌಲಭ್ಯಗಳನ್ನು ಒದಗಿಸಿಕೊಟ್ಟಿದೆ. ಹಾಗೆಯೇ ಜನರು ಕೂಡ ಅವರಿಗೆ ಅವಕಾಶವನ್ನು ಕಲ್ಪಿಸಿಕೊಡುವುದರ ಜತೆಗೆ ಅವರನ್ನು ಪ್ರೀತಿಯಿಂದ ಕಾಣಬೇಕು. ಆ ಮೂಲಕ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕು’ ಎಂದರು.