ಆಡಳಿತಾರೂಢ ಪಕ್ಷದ ನಾಯಕರು ಚುನಾವಣೆಯ ಹೊಸ್ತಿಲಲ್ಲಿ ಆಶ್ವಾಸನೆ ನೀಡುವುದು ಅರ್ಥಹೀನ ಅನಿಸುತ್ತದೆ. ಹಲವು ಭಾಗ್ಯಗಳನ್ನು ನೀಡಿದ ಸರ್ಕಾರ ಎಂಬ ಖ್ಯಾತಿಗೆ ಸರ್ಕಾರ ಪಾತ್ರವಾಗಿದೆ, ಆ ಕಾರ್ಯಕ್ರಗಳು ಎಷ್ಟರ ಮಟ್ಟಿಗೆ ಜನರಿಗೆ ತಲುಪಿವೆ ಎಂದು ಖಚಿತಪಡಿಸಿಕೊಂಡು, ಆ ನಂತರ ಆರೋಗ್ಯ ಭಾಗ್ಯದ ಬಗ್ಗೆ ಮಾತನಾಡಿದರೆ ಒಳಿತು.