ಬಂಟ ಸಮುದಾಯದಲ್ಲಿ ಶೇ. 10ರಷ್ಟು ಮಾತ್ರ ಶ್ರೀಮಂತರಿದ್ದಾರೆ. ಶೇ. 40ರಷ್ಟು ಜನರು ಮಾಧ್ಯಮ ವರ್ಗದವರಾಗಿದ್ದಾರೆ. ಉಳಿದ ಶೇ. 50ರಷ್ಟು ಮಂದಿ ಬಡವರಾಗಿದ್ದಾರೆ. ಕರಾವಳಿಯಲ್ಲಿ ಪ್ರತಿ ವರ್ಷ ನಡೆಯುವ ಧಾರ್ಮಿಕ ಕಾರ್ಯಗಳಿಗೆ ₹30 ಕೋಟಿ ಖರ್ಚಾಗುತ್ತಿದೆ. ಇದರಲ್ಲಿ ಬಹುತೇಕ ಪಾಲು ಬಂಟ ಸಮಾಜದ್ದು. ನಾಗಮಂಡಲೋತ್ಸವವನ್ನು ಕೋಟಿಗಟ್ಟಲೇ ವೆಚ್ಚದಲ್ಲಿ ಆಡಂಬರವಾಗಿ ಮಾಡುವುದು ಬಿಡಬೇಕು. ₹10 ಲಕ್ಷದೊಳಗೆ ನಾಗಮಂಡಲವನ್ನು ಮಾಡಬಹುದು. ಹಾಗಾಗಿ ಅದ್ಧೂರಿಯಾಗಿ ನಾಗಮಂಡಲ ಸೇವೆ, ದೇವಸ್ಥಾನಕ್ಕೆ ಚಿನ್ನದ ಹೊದಿಕೆಗಳ ಮೇಲೆ ಹಣ ವ್ಯಯಿಸುವುದನ್ನು ನಿಲ್ಲಿಸಿ.ಅದಕ್ಕೆ ಬಳಸುವ ಹಣವನ್ನು ಆಸ್ಪತ್ರೆಯನ್ನು ನಿರ್ಮಿಸಬೇಕು. ಆ ಮೂಲಕ ಬಡಜನರ ಆರೋಗ್ಯಕ್ಕೆ ಸೇವೆಗೆ ಮುಂದಾಗಬೇಕು ಎಂದರು.