ಕಾಪುವಿನ ಕೋತಲಕಟ್ಟೆಯ ನಿವಾಸಿ ಯಶೋಧಾ ಜೆ.ಬಂಗೇರ ಮಂಗಳವಾರ ಬೆಳಿಗ್ಗೆ 9ಕ್ಕೆ ಸೇಂಟ್ ಸಿಸಿಲಿಸ್ ಶಾಲೆಯ ಒಳರಸ್ತೆ ಮೂಲಕ ಬ್ರಹ್ಮಗಿರಿಗೆ ಹೋಗುವಾಗ ಬೈಕ್ನಲ್ಲಿ ಬಂದ ಕಳ್ಳ ಮಹಿಳೆಯ ಕುತ್ತಿಗೆಗೆ ಕೈ ಹಾಕಿ ಮಾಂಗಲ್ಯ ಸರ ಕೀಳಲು ಯತ್ನಿಸಿದ್ದಾನೆ. ಮಹಿಳೆ ಪ್ರತಿರೋಧ ತೋರಿದ್ದರಿಂದ ಒಂದು ತುಂಡು ಕುತ್ತಿಗೆಯಲ್ಲಿಯೇ ಉಳಿದು, ಮತ್ತೊಂದು ತುಂಡು ಕಳ್ಳನ ಪಾಲಾಗಿದೆ. ಸರದ ಮೌಲ್ಯ ₹ 45,000 ಎಂದು ಅಂದಾಜಿಸಲಾಗಿದೆ. ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.