ಘಟ್ಟಪ್ರದೇಶದಲ್ಲೂ ನಿರಂತರ ಮಳೆಯಾದ ಕಾರಣ ಬ್ರಹ್ಮಾವರ ಪರಿಸರದ ಮಡಿಸಾಲು ಮತ್ತು ಸೀತಾ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು, ಬಹುತೇಕ ತಗ್ಗು ಪ್ರದೇಶದಲ್ಲಿ ಪ್ರವಾಹದ ನೀರು ನುಗ್ಗಿದೆ. ಗುರುವಾರ ಮಧ್ಯಾಹ್ನದ ನಂತರ ಮಳೆಯ ಬಿರುಸು ಕಡಿಮೆಯಾಗಿದ್ದರೂ, ಈ ಎರಡೂ ಪ್ರವಾಹ ಏರಿಕೆ ಕಂಡಿದೆ. ಉಪ್ಪೂರು, ಆರೂರು, ಬೆಳ್ಮಾರು, ಮಟಪಾಡಿ, ಹಂದಾಡಿ, ಬಾರ್ಕೂರು, ಬಂಡೀಮಠ, ಬಾವಲಿಕುದ್ರು, ಪ್ರದೇಶದಲ್ಲಿ ಪ್ರವಾಹದಿಂದ ಕೃಷಿ ಭೂಮಿ ಜಲಾವೃತಗೊಂಡಿದೆ. ಬ್ರಹ್ಮಾವರ ಕೋಟ ಪರಿಸರದಲ್ಲಿ ಹೆಚ್ಚಿನ ಕಡೆ ಮಳೆನೆರೆಯಿಂದ ವಾಹನ ಸಂಚಾರಕ್ಕೂ ಅಡಚಣೆಯಾದ ಬಗ್ಗೆ ವರದಿಯಾಗಿದೆ.