<p><strong>ಉಡುಪಿ</strong>: ಕರಾವಳಿಯಲ್ಲಿ ಪ್ರಸಿದ್ಧಿ ಪಡೆದಿರುವ ಶಂಕರಪುರ ಮಲ್ಲಿಗೆಯ ಇಳುವರಿ ಕುಸಿದಿಲ್ಲ. ಆದರೆ, ದರ ಏರಿಳಿತದಿಂದಾಗಿ ಕೃಷಿಕರು ಸವಾಲು ಎದುರಿಸುವಂತಾಗಿದೆ.</p>.<p>ಮೇ 7ರಂದು ಒಂದು ಅಟ್ಟಿ ಮಲ್ಲಿಗೆಯ ದರ ₹370 ಇತ್ತು. ಶುಕ್ರವಾರ ₹570 ಇದ್ದರೆ, ಶನಿವಾರ ₹750ಕ್ಕೆ ಮುಟ್ಟಿದೆ. </p>.<p>ಕರಾವಳಿ ಭಾಗದಲ್ಲಿ ಬಾಳೆ ದಿಂಡಿನ ನಾರು ಬಳಸಿ ಮೊಗ್ಗು ಕಟ್ಟಲಾಗುತ್ತದೆ. ಸುಮಾರು 800 ಮೊಗ್ಗುಗಳಿರುವ ಗುಚ್ಛಕ್ಕೆ ಒಂದು ಚೆಂಡು ಎಂದು ಕರೆಯಲಾಗುತ್ತದೆ. ಇಂತಹ ನಾಲ್ಕು ಚೆಂಡು ಸೇರಿಸಿದರೆ ಒಂದು ಅಟ್ಟಿ ಆಗುತ್ತದೆ.</p>.<p>ಏಪ್ರಿಲ್, ಮೇ ತಿಂಗಳಲ್ಲಿ ಮದುವೆ ಮತ್ತು ಭೂತಕೋಲ ಕಾರ್ಯಕ್ರಮಗಳು ಇರುವ ಕಾರಣ ಶಂಕರಪುರ ಮಲ್ಲಿಗೆಗೆ ಎಲ್ಲಿಲ್ಲದ ಬೇಡಿಕೆ ಇರುತ್ತದೆ. ಆದರೆ, ಬೆಲೆಯಲ್ಲಿ ಸ್ಥಿರತೆ ಇಲ್ಲದ ಕಾರಣ ಶ್ರಮವಹಿಸಿ ಮಲ್ಲಿಗೆ ಬೆಳೆಯುವ ಕೃಷಿಕರು, ನಿರಾಸೆ ಅನುಭವಿಸುವಂತಾಗಿದೆ.</p>.<p>ಮಧ್ಯವರ್ತಿಗಳೇ ಬೆಲೆ ನಿಗದಿಪಡಿಸುವುದರಿಂದ ನಮ್ಮ ಶ್ರಮಕ್ಕೆ ಸರಿಯಾದ ಪ್ರತಿಫಲ ಸಿಗುತ್ತಿಲ್ಲ ಎಂಬುದು ರೈತರ ಆರೋಪ.</p>.<p>ಜಿಲ್ಲೆಯ ಶಂಕರಪುರ ಪ್ರದೇಶದಲ್ಲಿ 500ಕ್ಕೂ ಹೆಚ್ಚು ರೈತರು ಮಲ್ಲಿಗೆ ಕೃಷಿಯನ್ನೇ ನಂಬಿಕೊಂಡಿದ್ದಾರೆ. ಈ ಮಲ್ಲಿಗೆಗೆ ಕರಾವಳಿಯಲ್ಲಷ್ಟೇ ಅಲ್ಲದೆ ಮುಂಬೈನಲ್ಲೂ ಹೆಚ್ಚಿನ ಬೇಡಿಕೆಯಿದೆ. </p>.<p>‘ಈ ಬಾರಿ ಇಳುವರಿ ಚೆನ್ನಾಗಿಯೇ ಬಂದಿದೆ. ಆದರೆ, ಬಿಸಿಲಿನ ಝಳ ಹೆಚ್ಚಾಗಿರುವುದರಿಂದ ಬೆಂಕಿ ರೋಗ ಕಾಣಿಸಿಕೊಳ್ಳುವ ಭೀತಿ ಎದುರಾಗಿದೆ. ಮಲ್ಲಿಗೆ ಗಿಡಗಳಿಗೆ ಸಿಂಪಡಿಸುವ ಕೀಟನಾಶಕಗಳ ದರವೂ ಗಗನಕ್ಕೇರಿದೆ’ ಎನ್ನುತ್ತಾರೆ ಕೃಷಿಕ ಮಾರ್ಕ್ ಡಿಸೋಜ.</p>.<p>‘ಬೇಸಿಗೆ ಅವಧಿಯಲ್ಲೇ ಹೆಚ್ಚು ಇಳುವರಿ ಸಿಗುತ್ತದೆ. ಆದರೆ, ಅಕಾಲಿಕ ಮಳೆ ಬಂದರೆ ಗಿಡಗಳಿಗೆ ಕೊಳೆ ರೋಗ ಬರುತ್ತದೆ. ‘ಉಡುಪಿ ಮಲ್ಲಿಗೆ’ ಆ್ಯಪ್ ಮೂಲಕವೇ ನಮಗೆ ಮಾರುಕಟ್ಟೆ ದರದ ಬಗ್ಗೆ ಮಾಹಿತಿ ಸಿಗುತ್ತದೆ’ ಎಂದು ಹೇಳುತ್ತಾರೆ.</p>.<p>‘ಕೋವಿಡ್ಗಿಂತ ಮೊದಲು ವಿಮಾನದ ಮೂಲಕ ಮುಂಬೈಗೆ ಮಲ್ಲಿಗೆ ರವಾನಿಸುತ್ತಿದ್ದೆವು. ಆ ನಂತರ ವಿಮಾನದ ಸಮಯ ವ್ಯತ್ಯಾಸವಾಗಿರುವುದರಿಂದ ಈಗ ಬಸ್ ಮೂಲಕ ಕಳುಹಿಸುತ್ತಿದ್ಧೇವೆ’ ಎನ್ನುತ್ತಾರೆ ಮಾರಾಟಗಾರ ವಿನ್ಸೆಂಟ್ ರೋಡ್ರಿಗಸ್.</p>.<p>ಉದ್ಯೋಗ ಖಾತರಿ ಯೋಜನೆಯಡಿ 5 ಗುಂಟೆಯಿಂದ ಒಂದು ಎಕರೆವರೆಗೆ ಮಲ್ಲಿಗೆ ಗಿಡ ನೆಡಲು ನೆರವು ನೀಡಲಾಗುತ್ತಿದೆ. ರೈತರು ಇದರ ಪ್ರಯೋಜನ ಪಡೆದುಕೊಳ್ಳಬೇಕಿದೆ ಭುವನೇಶ್ವರಿ ಉಪ ನಿರ್ದೇಶಕಿ ತೋಟಗಾರಿಕೆ ಇಲಾಖೆ ಉಡುಪಿ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಉಡುಪಿ</strong>: ಕರಾವಳಿಯಲ್ಲಿ ಪ್ರಸಿದ್ಧಿ ಪಡೆದಿರುವ ಶಂಕರಪುರ ಮಲ್ಲಿಗೆಯ ಇಳುವರಿ ಕುಸಿದಿಲ್ಲ. ಆದರೆ, ದರ ಏರಿಳಿತದಿಂದಾಗಿ ಕೃಷಿಕರು ಸವಾಲು ಎದುರಿಸುವಂತಾಗಿದೆ.</p>.<p>ಮೇ 7ರಂದು ಒಂದು ಅಟ್ಟಿ ಮಲ್ಲಿಗೆಯ ದರ ₹370 ಇತ್ತು. ಶುಕ್ರವಾರ ₹570 ಇದ್ದರೆ, ಶನಿವಾರ ₹750ಕ್ಕೆ ಮುಟ್ಟಿದೆ. </p>.<p>ಕರಾವಳಿ ಭಾಗದಲ್ಲಿ ಬಾಳೆ ದಿಂಡಿನ ನಾರು ಬಳಸಿ ಮೊಗ್ಗು ಕಟ್ಟಲಾಗುತ್ತದೆ. ಸುಮಾರು 800 ಮೊಗ್ಗುಗಳಿರುವ ಗುಚ್ಛಕ್ಕೆ ಒಂದು ಚೆಂಡು ಎಂದು ಕರೆಯಲಾಗುತ್ತದೆ. ಇಂತಹ ನಾಲ್ಕು ಚೆಂಡು ಸೇರಿಸಿದರೆ ಒಂದು ಅಟ್ಟಿ ಆಗುತ್ತದೆ.</p>.<p>ಏಪ್ರಿಲ್, ಮೇ ತಿಂಗಳಲ್ಲಿ ಮದುವೆ ಮತ್ತು ಭೂತಕೋಲ ಕಾರ್ಯಕ್ರಮಗಳು ಇರುವ ಕಾರಣ ಶಂಕರಪುರ ಮಲ್ಲಿಗೆಗೆ ಎಲ್ಲಿಲ್ಲದ ಬೇಡಿಕೆ ಇರುತ್ತದೆ. ಆದರೆ, ಬೆಲೆಯಲ್ಲಿ ಸ್ಥಿರತೆ ಇಲ್ಲದ ಕಾರಣ ಶ್ರಮವಹಿಸಿ ಮಲ್ಲಿಗೆ ಬೆಳೆಯುವ ಕೃಷಿಕರು, ನಿರಾಸೆ ಅನುಭವಿಸುವಂತಾಗಿದೆ.</p>.<p>ಮಧ್ಯವರ್ತಿಗಳೇ ಬೆಲೆ ನಿಗದಿಪಡಿಸುವುದರಿಂದ ನಮ್ಮ ಶ್ರಮಕ್ಕೆ ಸರಿಯಾದ ಪ್ರತಿಫಲ ಸಿಗುತ್ತಿಲ್ಲ ಎಂಬುದು ರೈತರ ಆರೋಪ.</p>.<p>ಜಿಲ್ಲೆಯ ಶಂಕರಪುರ ಪ್ರದೇಶದಲ್ಲಿ 500ಕ್ಕೂ ಹೆಚ್ಚು ರೈತರು ಮಲ್ಲಿಗೆ ಕೃಷಿಯನ್ನೇ ನಂಬಿಕೊಂಡಿದ್ದಾರೆ. ಈ ಮಲ್ಲಿಗೆಗೆ ಕರಾವಳಿಯಲ್ಲಷ್ಟೇ ಅಲ್ಲದೆ ಮುಂಬೈನಲ್ಲೂ ಹೆಚ್ಚಿನ ಬೇಡಿಕೆಯಿದೆ. </p>.<p>‘ಈ ಬಾರಿ ಇಳುವರಿ ಚೆನ್ನಾಗಿಯೇ ಬಂದಿದೆ. ಆದರೆ, ಬಿಸಿಲಿನ ಝಳ ಹೆಚ್ಚಾಗಿರುವುದರಿಂದ ಬೆಂಕಿ ರೋಗ ಕಾಣಿಸಿಕೊಳ್ಳುವ ಭೀತಿ ಎದುರಾಗಿದೆ. ಮಲ್ಲಿಗೆ ಗಿಡಗಳಿಗೆ ಸಿಂಪಡಿಸುವ ಕೀಟನಾಶಕಗಳ ದರವೂ ಗಗನಕ್ಕೇರಿದೆ’ ಎನ್ನುತ್ತಾರೆ ಕೃಷಿಕ ಮಾರ್ಕ್ ಡಿಸೋಜ.</p>.<p>‘ಬೇಸಿಗೆ ಅವಧಿಯಲ್ಲೇ ಹೆಚ್ಚು ಇಳುವರಿ ಸಿಗುತ್ತದೆ. ಆದರೆ, ಅಕಾಲಿಕ ಮಳೆ ಬಂದರೆ ಗಿಡಗಳಿಗೆ ಕೊಳೆ ರೋಗ ಬರುತ್ತದೆ. ‘ಉಡುಪಿ ಮಲ್ಲಿಗೆ’ ಆ್ಯಪ್ ಮೂಲಕವೇ ನಮಗೆ ಮಾರುಕಟ್ಟೆ ದರದ ಬಗ್ಗೆ ಮಾಹಿತಿ ಸಿಗುತ್ತದೆ’ ಎಂದು ಹೇಳುತ್ತಾರೆ.</p>.<p>‘ಕೋವಿಡ್ಗಿಂತ ಮೊದಲು ವಿಮಾನದ ಮೂಲಕ ಮುಂಬೈಗೆ ಮಲ್ಲಿಗೆ ರವಾನಿಸುತ್ತಿದ್ದೆವು. ಆ ನಂತರ ವಿಮಾನದ ಸಮಯ ವ್ಯತ್ಯಾಸವಾಗಿರುವುದರಿಂದ ಈಗ ಬಸ್ ಮೂಲಕ ಕಳುಹಿಸುತ್ತಿದ್ಧೇವೆ’ ಎನ್ನುತ್ತಾರೆ ಮಾರಾಟಗಾರ ವಿನ್ಸೆಂಟ್ ರೋಡ್ರಿಗಸ್.</p>.<p>ಉದ್ಯೋಗ ಖಾತರಿ ಯೋಜನೆಯಡಿ 5 ಗುಂಟೆಯಿಂದ ಒಂದು ಎಕರೆವರೆಗೆ ಮಲ್ಲಿಗೆ ಗಿಡ ನೆಡಲು ನೆರವು ನೀಡಲಾಗುತ್ತಿದೆ. ರೈತರು ಇದರ ಪ್ರಯೋಜನ ಪಡೆದುಕೊಳ್ಳಬೇಕಿದೆ ಭುವನೇಶ್ವರಿ ಉಪ ನಿರ್ದೇಶಕಿ ತೋಟಗಾರಿಕೆ ಇಲಾಖೆ ಉಡುಪಿ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>