₹50 ಲಕ್ಷ ರೂ ವೆಚ್ಚದಲ್ಲಿ 300 ಮೀಟರ್ ಉದ್ದದ ತಡೆಗೋಡೆಯನ್ನುಕೆಐಆರ್ಡಿಎಲ್ ಹಾಗೂ ಸಣ್ಣ ನೀರಾವರಿ ಇಲಾಖೆ ಮೂಲಕ ನಿರ್ಮಿಸಲಾಗಿದೆ. ನದಿ ದಂಡೆಯ ಅರ್ಧ ಚಂದ್ರಾಕೃತಿ ವ್ಯಾಪ್ತಿಗೆ ಮಾತ್ರ ತಡೆಗೋಡೆಗೆ ಯೋಜನೆ ಸಿದ್ಧಪಡಿಸಲಾಗಿದೆ. ಇದರಿಂದ ಪಡುಹಿತ್ಲು,ಅಂಕುದ್ರು,ನಡಿಪಟ್ಣ,ಕಲ್ಲಟ್ಟೆ,ಕಾಡಿಪಟ್ಣ ಹಾಗೂ ಕಲ್ಸಂಕ ಭಾಗದ ಗ್ರಾಮಸ್ಥರು ನೆರೆ ಭೀತಿಗೆ ಒಳಗಾಗಿದ್ದಾರೆ.