ವಿದ್ಯುತ್ ಪರಿವರ್ತಕಗಳ ಪಕ್ಕದಲ್ಲಿ ಕುರುಚಲು ಗಿಡ, ಹುಲ್ಲನ್ನು ಕತ್ತರಿಸಿ ಸ್ವಚ್ಛ ಮಾಡುವ ಕೆಲಸ ನಡೆಯುತ್ತಿಲ್ಲ. ಕಾಲಕಾಲಕ್ಕೆ ಸ್ವಚ್ಛತೆ ನಡೆಸಿದರೆ ಪರಿವರ್ತಕಗಳಿಂದ ಹೊರ ಬರುವ ಬೆಂಕಿಯ ಕಿಡಿಗಳು ಹರಡುವುದಿಲ್ಲ. ಇವು ಜನವಸತಿರಹಿತ ಪ್ರದೇಶಗಳಲ್ಲಿ ಇರುವುದರಿಂದ ಅಪಾಯ ಕಡಿಮೆ ಎಂಬ ಭಾವನೆ ಇದಕ್ಕೆ ಕಾರಣವಾಗಿ ಸ್ವಚ್ಛತೆಯತ್ತ ನಿರ್ಲಕ್ಷ್ಯ ವಹಿಸಿರಬಹುದು.ತಾಲ್ಲೂಕಿನ ಅಲಂಗಾರುಗುಡ್ಡೆಯ ಕೋರೆ ಪ್ರದೇಶದಲ್ಲಿ ಸತತ ಎರಡನೇ ವರ್ಷ ಬೆಂಕಿ ಪ್ರಕರಣ ನಡೆಯುತ್ತಿದೆ. ಸೋಮವಾರ ರಾತ್ರಿ ಬಿದ್ದ ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ದಳದವರು ಮಂಗಳವಾರ ಬೆಳಿಗ್ಗೆ ಬಂದು ಪ್ರಯತ್ನಿಸಿದರೂ ಮಂಗಳವಾರ ಮಧ್ಯಾಹ್ನದವರೆಗೂ ಬೆಂಕಿ ಉರಿಯುತ್ತಿತ್ತು. ಸ್ಥಳೀಯ ಪಂಚಾಯಿತಿ ಸದಸ್ಯ ಸೋಮನಾಥ್ ಸಾರ್ವಜನಿಕರ ಸಹಕಾ ರದೊಂದಿಗೆ ಬೆಂಕಿ ನಂದಿಸಲು ಪ್ರಯತ್ನಿಸಿದರು.