ಬಿ.ಕಾಂ, ಬಿ.ಪಿ.ಇಡಿ, ಎಂ.ಪಿ.ಇಡಿ ಪದವಿ ಪಡೆದಿರುವ ರವೀಂದ್ರ, ಶಿರಸಿಯ ಕಾಲೇಜೊಂದರಲ್ಲಿ ಕ್ರೀಡಾ ಶಿಕ್ಷಕರ ನೌಕರಿ ದೊರೆತರೂ ಅದನ್ನು ಬಿಟ್ಟರು. ಬ್ಯಾಡ್ಮಿಂಟನ್ ತರಬೇತಿಯನ್ನೇ ಬದುಕಿಗಾಗಿ ಆಯ್ಕೆ ಮಾಡಿಕೊಂಡರು. ಈ ಕ್ರೀಡೆಯ ಕುರಿತು ಪ್ರಾಥಮಿಕ ಪಾಠಗಳನ್ನು ಸಾಗರದ ಜಯರಾಮ ಪೈ ಅವರಿಂದ ಪಡೆದರು. ನಂತರ ಶಿರಸಿಯಲ್ಲಿ ಆಸಕ್ತರಿಗೆ ಬ್ಯಾಡ್ಮಿಂಟನ್ ತರಬೇತಿ ನೀಡಲು ಆರಂಭಿಸಿದರು. ಕೆಲವು ವರ್ಷಗಳಿಂದ ಬೆಂಗಳೂರಿನಲ್ಲಿ ಅದೇ ವೃತ್ತಿ ಮುಂದುವರಿಸಿದ್ದಾರೆ. ಈವರೆಗೆ ಅವರು ನೂರಾರು ಯುವಕರಿಗೆ ಬ್ಯಾಡ್ಮಿಂಟನ್ ತರಬೇತಿ ನೀಡಿದ್ದಾರೆ. ಅವರಿಂದ ತರಬೇತಿ ಪಡೆದವರಲ್ಲಿ 10–12 ಜನ ರಾಜ್ಯ ಮತ್ತು ರಾಷ್ಟ್ರಮಟ್ಟದ ಟೂರ್ನಿಗಳಲ್ಲಿ ಆಡುತ್ತಿದ್ದಾರೆ.