‘ದೋಣಿಯ ತಳಭಾಗ ಬಿರುಕು ಬಿಟ್ಟು ನೀರು ತುಂಬಿ ಮುಳುಗುವ ಸ್ಥಿತಿಯಲ್ಲಿತ್ತು. ಅದನ್ನು ದಡಕ್ಕೆ ತರುವ ವೇಳೆ ಅಳಿವೆಯ ಮರಳು ದಿಣ್ಣೆಗೆ ಬಡಿದು ದೋಣಿ ಛಿದ್ರವಾಯಿತು. ಬಂದರು ನಿರ್ಮಾಣ ಮಾಡುತ್ತಿರುವ ಪೋರ್ಟ್ ಕಂಪನಿ ಅಳಿವೆಯ ಹೂಳು ತೆಗೆಯಲು ಅವೈಜ್ಞಾನಿಕ ವಿಧಾನ ಅನುಸರಿಸಿದೆ. ಇದರಿಂದ ಅಳಿವೆಯಲ್ಲಿ ಪುನಃ ಹೂಳು ತುಂಬುತ್ತಿದ್ದು, ದೋಣಿ ದುರಂತ ಸಂಭವಿಸಲು ಕಾರಣವಾಗಿದೆ. ಇದರಿಂದ ಸುಮಾರು ₹ 95 ಲಕ್ಷ ನಷ್ಟವಾಗಿದೆ’ ಎಂದು ದೋಣಿ ಮಾಲೀಕರ ಸಂಘದ ಕಾರ್ಯದರ್ಶಿ ವಿವನ್ ಫರ್ನಾಂಡಿಸ್ ತಿಳಿಸಿದರು.