ಮನೆಯ ಪಕ್ಕದಲ್ಲಿ ಸಂಗ್ರಹಿಸಿಟ್ಟ ಕಟ್ಟಿಗೆಯಲ್ಲಿ ಹಾವು ಕಾಣಿಸಿಕೊಂಡಿತ್ತು. ಈ ಬಗ್ಗೆ ಲಂಬೋದರ ಅವರು ಸಮಾಜ ಸೇವಕ ಅಶೋಕ ಗಜಿನಕರ ಮೂಲಕ ಅರಣ್ಯ ಇಲಾಖೆಯನ್ನು ಸಂಪರ್ಕಿಸಿದರು. ಬಳಿಕ ಗೋಪಶಿಟ್ಟಾ ವಲಯ ಅರಣ್ಯಾಧಿಕಾರಿ ಜಿ.ವಿ.ನಾಯ್ಕ ಅವರ ಮಾರ್ಗದರ್ಶನದಲ್ಲಿ ಅರಣ್ಯ ರಕ್ಷಕರಾದ ರಮೇಶ ಬಡಿಗೇರ ಮತ್ತು ಮಲ್ಲಪ್ಪ ಮಾಂಜರಿ, ಪ್ರಶಾಂತ ಅವರು ಜೊತೆಗೂಡಿ ಹಾವನ್ನು ಹಿಡಿದರು.