ದೇವಸ್ಥಾನದಲ್ಲಿ ಕಲಾವೃದ್ಧಿ ಹೋಮ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮವು ಈಚೆಗೆ ವಿಜೃಂಭಣೆಯಿಂದ ನೆರವೇರಿತು. ಕಲಾವೃದ್ಧಿಯ ಅಂಗವಾಗಿ ದೇಗುಲದಲ್ಲಿಗಣೇಶ ಪೂಜೆ, ಪುಣ್ಯಾಹ ನಾಂದಿ, ದೇವ ಪ್ರಾರ್ಥನೆ, ಕೌತುಕ ಬಂಧನ, ವಾಸ್ತು, ರಾಕ್ಷೋಘ್ನಹೋಮ, ಬಲಿ, ಕರ್ಮಾಂಗ ಪುಣ್ಯಾಹ, ಭೂತ ಶುದ್ಧಿ, ನವಗ್ರಹ ಹೋಮ, ಪೂರ್ಣಾಹುತಿ ಹಮ್ಮಿಕೊಳ್ಳಲಾಯಿತು. ಇದರೊಂದಿಗೆ ವಿವಿಧ ಧಾರ್ಮಿಕ ವಿಧಿ ವಿಧಾನಗಳನ್ನು ನಿಷ್ಠೆಯಿಂದ ನೆರವೇರಿಸಲಾಯಿತು.