ಮಧ್ಯಾರಾಧನೆ ನಿಮಿತ್ತ ಮಧ್ಯಾಹ್ನ ನಡೆದ ಅನ್ನಸಂತರ್ಪಣೆಯಲ್ಲಿ 5000ಕ್ಕೂ ಅಧಿಕ ಭಕ್ತರು ಪ್ರಸಾದ ಸ್ವೀಕರಿಸಿದರು. ಸುರಿವ ಮಳೆಯನ್ನೂ ಲೆಕ್ಕಿಸದೇ ಭಕ್ತರ ದಂಡು ರಾಘವೇಂದ್ರ ಮಠಕ್ಕೆ ಬಂದಿತ್ತು. ಸಂಜೆ ದೈವಜ್ಞ ಮಹಿಳಾ ಮಂಡಳಿ ಭಜನೆ ಕಾರ್ಯಕ್ರಮ, ನಂತರ ಉಪನ್ಯಾಸ ಕಾರ್ಯಕ್ರಮ ಜರುಗಿತು. ಸೇವಾ ಸಮಿತಿ ಪ್ರಮುಖರಾದ ಡಿ.ಡಿ.ಮಾಡಗೇರಿ, ಶ್ರೀನಿವಾಸ ಹೆಬ್ಬಾರ್, ಕೆ.ವಿ.ಭಟ್, ಐ.ಎಂ.ಹೆಗಡೆ ಇದ್ದರು.