ಏನಾಯಿತು?:ತಾಲ್ಲೂಕಿನ ತೊಡೂರು ನಿವಾಸಿ ಸಂಜಯ ತಳೇಕರ,ತಮ್ಮ ಸಂಬಂಧಿಯ ಎರಡು ತಿಂಗಳ ಮಗುವಿಗೆ ಚಿಕಿತ್ಸೆಗೆಂದು ಸೆ.7ರಂದು ಹಣ ತೆಗೆದುಕೊಂಡು ಮಣಿಪಾಲಕ್ಕೆ ಹೊರಟಿದ್ದರು. ಬೆಳಿಗ್ಗೆ 6ಕ್ಕೆ ಕಾರವಾರ ರೈಲು ನಿಲ್ದಾಣದಲ್ಲಿ ಉಡುಪಿಗೆ ಟಿಕೆಟ್ ಪಡೆದುಕೊಂಡಬಳಿಕ ಅವರ ಪರ್ಸ್ ಪ್ಯಾಂಟ್ ಜೇಬಿನಿಂದ ಬಿದ್ದಿತ್ತು.ಅದರಲ್ಲಿ₹ 21,500 ನಗದು, ಮೂರು ಬ್ಯಾಂಕ್ಗಳ ಎಟಿಎಂ ಕಾರ್ಡ್ಗಳು, ಡಿ.ಎಲ್, ಆಧಾರ್ಗುರುತಿನ ಚೀಟಿ ಹಾಗೂ ಪಾನ್ ಕಾರ್ಡ್ಇದ್ದವು. ಸ್ವಲ್ಪ ಹೊತ್ತಿನ ಬಳಿಕ ಪರ್ಸ್ ಕಳೆದುಕೊಂಡಿದ್ದು ಅರಿವಾಗಿ ರೈಲ್ವೆ ಪೊಲೀಸರಿಗೆ ತಿಳಿಸಿದರು.