ಕಿತ್ತೂರು, ಖಾನಾಪುರ, ಕರಾವಳಿಯ ತಾಲ್ಲೂಕುಗಳಲ್ಲಿ ಪ್ರಚಾರ ಸಭೆಗಳಿದ್ದರೆ ಅವರು ಬೆಳಿಗ್ಗೆ 6ರಿಂದ 7 ಗಂಟೆಯೊಳಗೆ ಮನೆಯಿಂದ ಹೊರಡುತ್ತಾರೆ. ‘ಸಾಹೇಬ್ರು ಎಷ್ಟೇ ಬೇಗ ಹೊರಡುವುದಾದರೂ, ನಿತ್ಯದ ಅನುಷ್ಠಾನ ಮುಗಿಸಿಯೇ ಮನೆಯಿಂದ ಹೊರಬೀಳುವುದು. ರಾತ್ರಿ 2 ಗಂಟೆಗೆ ಮಲಗಿದರೂ ಬೆಳಿಗ್ಗೆ 6 ಗಂಟೆಗೆ ಎದ್ದು ಬಿಡುತ್ತಾರೆ. ದೂರ ಹೋಗುವುದಿದ್ದರೆ ಇನ್ನೂ ಬೇಗ ಎದ್ದು, ಯೋಗ, ವ್ಯಾಯಾಮ, ಧ್ಯಾನ ಮಾಡಿ, ದೇವರ ಪೂಜೆ ಮುಗಿಸಿದ ಮೇಲೆಯೇ ಅವರ ಮುಂದಿನ ಕಾರ್ಯಚಟುವಟಿಕೆ’ ಎನ್ನುತ್ತಾರೆ ಆಪ್ತ ಸಹಾಯಕ ಸುರೇಶ ಶೆಟ್ಟಿ.