ದುಬೈ ಮತ್ತು ಯುಎಇನಲ್ಲಿದ್ದವರನ್ನು ಭಟ್ಕಳಕ್ಕೆ ಕಳುಹಿಸಲು ಮುತುವರ್ಜಿ ವಹಿಸಿದ್ದ ಅನಿವಾಸಿ ಭಾರತೀಯ ಉದ್ಯಮಿ, ತಂಝೀಮ್ ಉಪಾಧ್ಯಕ್ಷ ಆತಿಕುರ್ ರೆಹ್ಮಾನ್ ಮುನೀರಿ, ಎಲ್ಲರನ್ನೂ ಭಟ್ಕಳಕ್ಕೆ ಕಳುಹಿಸಲು ಸಹಕರಿಸಿದ ಭಾರತೀಯ ರಾಯಭಾರಿ ಕಚೇರಿ, ಮಂಗಳೂರು ಹಾಗೂ ಉತ್ತರಕನ್ನಡ ಜಿಲ್ಲಾಡಳಿತ ಹಾಗೂ ದಾನಿಗಳಿಗೆ ದುಬೈನಿಂದಲೇ ಸಂದೇಶದ ಮೂಲಕ ಕೃತಜ್ಞತೆ ಸಲ್ಲಿಸಿದ್ದಾರೆ.