‘ಪಶ್ಚಿಮ ಘಟ್ಟ ಭಾಗದಲ್ಲಿ ಜನರು ಪಾರಂಪರಿಕವಾಗಿ ಕೃಷಿ, ಕೈಗಾರಿಕೆ, ಗುಡಿಕೈಗಾರಿಕೆ ಚಟುವಟಿಕೆಗಳನ್ನು ಪರಿಸರ ಪೂರಕವಾಗಿ ನಡೆಸುತ್ತಿದ್ದಾರೆ. ಅವೈಜ್ಞಾನಿಕವಾದ ವರದಿಯಿಂದ ಇಲ್ಲಿಯ ಕೈಗಾರಿಕೆ, ಕೃಷಿ, ರಸ್ತೆ, ಕಟ್ಟಡ, ಪ್ರವಾಸೋದ್ಯಮ ವಲಯಕ್ಕೆ ಗಂಭೀರವಾದ ಪರಿಣಾಮ ಬೀರಲಿದೆ. ಯುವಜನತೆ ಉದ್ಯೋಗಕ್ಕಾಗಿ ಬೇರೆ ಕಡೆ ವಲಸೆ ಹೋಗುತ್ತಿದ್ದು, ಇಲ್ಲಿಯ ಗ್ರಾಮೀಣ ಹಾಗೂ ನಗರ ಬದುಕು ಸಂಕಷ್ಟದಲ್ಲಿದೆ’ ಎಂದು ಹೇಳಿದ್ದಾರೆ.