ಪಟ್ಟಣದ ಹವ್ಯಕ ಸಭಾ ಭವನದಲ್ಲಿ ಸಮಿತಿ ವತಿಯಿಂದ ಗುರುವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಕುಮಟಾ-ಹೊನ್ನಾವರ ಪಟ್ಟಣಕ್ಕೆ ನೀರು ಪೂರೈಕೆ ಮಾಡುವ ಮರಾಕಲ್ ಯೋಜನೆಯ ಕುಡಿಯುವ ನೀರು ಅನುಷ್ಠಾನಗೊಂಡಿದ್ದು ಅಘನಾಶಿನಿ ನದಿಯ ದೀವಳ್ಳಿ ಬಳಿಯೇ ಆಗಿದೆ. ಅಲ್ಲಿ ಬೇಸಿಗೆ ಸಂದರ್ಭದಲ್ಲಿ ನೀರಿನ ಕೊರತೆ ಉಂಟಾಗುತ್ತದೆ. ಹೀಗಿರುವಾಗ ಅಲ್ಲಿಯೇ ಮತ್ತೆ ಬಹುಗ್ರಾಮ ಕುಡಿಯುವ ನೀರು ಯೋಜನೆ ಆರಂಭಿಸಿದರೆ ಅಘನಾಶಿನಿ ನದಿಯ ದೀವಳ್ಳಿ, ಸಂತೆಗುಳಿ ಗ್ರಾಮದ ತೋಟ, ಕೃಷಿಗೆ ನೀರಿನ ಕೊರತೆ ಉಂಟಾಗಿ ಮುಂದೆ ಉಪ್ಪು ನೀರು ಬರುವ ಸಾಧ್ಯತೆಯೂ ಇದೆ’ ಎಂದರು.