‘ಎಂಜಿನಿಯರ್ಗಳು ಕಾಮಗಾರಿ ಗುಣಮಟ್ಟದಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಾರದು. ಆಗ ಒಳ್ಳೆಯ ಕೆಲಸಗಳು ಆಗುತ್ತವೆ. ಹೊಂದಾಣಿಕೆ ಮಾಡಿಕೊಳ್ಳದ ಗುಣಮಟ್ಟದ ಕಾಮಗಾರಿ ನಡೆಯಬೇಕೆನ್ನುವ ಪ್ರಜ್ಞೆ ಜಾಗೃತಗೊಳಿಸುವುದೇ ಈ ದಿನ ಆಚರಣೆಯ ಉದ್ದೇಶ. ಬ್ರಿಟಿಷರ ಕಾಲದ ಕಟ್ಟಡಗಳು ಇಂದಿಗೂ ಸುಭದ್ರವಾಗಿವೆ. ಆದರೆ, ಇತ್ತೀಚೆಗೆ ಕಟ್ಟುತ್ತಿರುವ ಕಟ್ಟಡಗಳು ಕುಸಿದು ಬೀಳುತ್ತಿವೆ. ತಂತ್ರಜ್ಞಾನ ಬದಲಾದಂತೆ ಎಂಜಿನಿಯರ್ಗಳ ಜವಾಬ್ದಾರಿ ಕೂಡ ಹೆಚ್ಚುತ್ತದೆ. ಕೌಶಲ ಬಳಸಿ, ಬಾಳಿಕೆ ಬರುವ ಕಟ್ಟಡ ನಿರ್ಮಾಣದ ಬಗ್ಗೆ ಯೋಚಿಸಬೇಕು’ ಎಂದು ಪ್ರಭು ಹೇಳಿದರು.