‘ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಅವರ ಭಾವಚಿತ್ರ ಇರುವ ‘ಡೆಪ್ಯುಟಿ ಕಮೀಷನರ್ ಆಫ್ ಉತ್ತರ ಕನ್ನಡ’ ಹೆಸರಿನ ನಕಲಿ ಖಾತೆ ಸೃಷ್ಟಿಸಿ ಅದರ ಮೂಲಕ ಸುರೇಶ್ ಖಾರ್ವಿ ಎಂಬುವವರಿಗೆ ವಂಚಿಸುವ ಪ್ರಯತ್ನ ನಡೆದಿದೆ. ಯಾರದ್ದೋ ಮನೆಯ ಪೀಠೋಪಕರಣದ ಚಿತ್ರವನ್ನು ಮೆಸೆಂಜರ್ನಲ್ಲಿ ಕಳಿಸಿ ಮಾರಾಟ ಮಾಡಲು ಮುಂಗಡ ಹಣ ನೀಡುವ ಬೇಡಿಕೆ ಇಡಲಾಗಿದೆ’ ಎಂದು ಜಿಲ್ಲಾಧಿಕಾರಿ ಆಪ್ತ ಸಹಾಯಕ ಜಗದೀಶ್ ಪೂಜಾರಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.