ಗಣಪತಿಗೆ ಮೋದಕ, ಪಂಚಕಜ್ಜಾಯ, ಗರಿಕೆ ಮುಂತಾದವುಗಳನ್ನು ಅರ್ಪಿಸಿದ ಭಕ್ತರು ವಿಶೇಷ ಪೂಜೆ ನೆರವೇರಿಸಿದರು. ಎರಡು ವರ್ಷಗಳಿಂದ ಕೋವಿಡ್ ಸಾಂಕ್ರಾಮಿಕ ಸೋಂಕಿನಿಂದಾಗಿ ಹಬ್ಬವು ಕಳೆಗುಂದಿತ್ತು. ಈ ಬಾರಿ ಸರ್ಕಾರವು ಸಾರ್ವಜನಿಕ ಉತ್ಸವಗಳಿಗೆ ನಿರ್ಬಂಧ ವಿಧಿಸಿಲ್ಲ. ಹಾಗಾಗಿ ಜಿಲ್ಲೆಯಾದ್ಯಂತ ಒಟ್ಟು 1,338 ಕಡೆಗಳಲ್ಲಿ ಅನುಮತಿ ಪಡೆದು ಸಾರ್ವಜನಿಕ ಗಣೇಶೋತ್ಸವ ಆಯೋಜಿಸಲಾಗುತ್ತಿದೆ.