<p><strong>ಕಾರವಾರ</strong>: ‘ಇಡೀ ದೇಶ ಪಹಲ್ಗಾಮ್ ದಾಳಿಯ ನೋವಿನಲ್ಲಿರುವಾಗ ಕರಾವಳಿ ಉತ್ಸವ ಆಯೋಜಿಸುವುದು ಸರಿಯಲ್ಲ. ಹೀಗಾಗಿ ಉತ್ಸವ ರದ್ದುಪಡಿಸಬೇಕು’ ಎಂದು ಸನಾತನ ಧರ್ಮ ರಕ್ಷಣಾ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಗಜೇಂದ್ರ ನಾಯ್ಕ ಆಗ್ರಹಿಸಿದರು.</p>.<p>ಇಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪಹಲ್ಗಾಮ್ ದಾಳಿಯಲ್ಲಿ ಉಗ್ರರು ಹತ್ಯೆಗೈದಿರುವುದು ಪೈಶಾಚಿಕ ಕೃತ್ಯ. ದುರ್ಘಟನೆಯಲ್ಲಿ ರಾಜ್ಯದ ಮೂವರು ಮೃತಪಟ್ಟಿದ್ದಾರೆ. ಇದೊಂದು ಶೋಕದ ಸಮಯ. ಇಂತ ಸ್ಥಿತಿಯಲ್ಲಿ ಉತ್ಸವ ಆಯೋಜಿಸಿ ರಂಜಿಸುವುದು ಸರಿಯಲ್ಲ’ ಎಂದರು.</p>.<p>‘ಪಾಕಿಸ್ತಾನದ ಕುಮ್ಮಕ್ಕಿನಿಂದ ದಾಳಿ ನಡೆದಿರುವ ಸಾಧ್ಯತೆ ಇದೆ. ಈ ಕಾರಣಕ್ಕೆ ಕೇಂದ್ರ ಸರ್ಕಾರ ಯುದ್ಧ ಸಾರುವ ಸ್ಥಿತಿಯಲ್ಲಿದೆ. ಗಡಿಭಾಗದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ನೌಕಾನೆಲೆ ಇರುವ ಕಾರವಾರವೂ ಸೂಕ್ಷ್ಮ ಸ್ಥಳವಾಗಿರುವುದರಿಂದ ಇಲ್ಲಿ ಕಟ್ಟೆಚ್ಚರ ವಹಿಸಬೇಕು. ಹೀಗಾಗಿ ಜನರು ಹೆಚ್ಚು ಸೇರುವ ಉತ್ಸವ ಆಯೋಜಿಸಬಾರದು’ ಎಂದು ಆಗ್ರಹಿಸಿದರು.</p>.<p>‘ದೇಶದ ಸೈನಿಕರಿಗೆ ನೈತಿಕ ಸ್ಥೈರ್ಯ ತುಂಬಲು ಇಡೀ ಸಮಾಜ ಒಗ್ಗಟ್ಟಾಗಿ ನಿಲ್ಲಬೇಕು. ಸೇನೆಯ ವಿರುದ್ಧ ಟೀಕಿಸುವ ಕೆಲಸ ನಡೆಯಬಾರದು. ಸೈನಿಕರು ಪ್ರಾಣ ಒತ್ತೆ ಇಟ್ಟು ಹೋರಾಡುವ ಸ್ಥಿತಿಯಲ್ಲಿ ಉತ್ಸವ ಆಯೋಜಿಸಿ ಜನರು ರಂಜಿಸುವುದು ಸರಿಯಾಗದು’ ಎಂದರು.</p>.<p>ವೇದಿಕೆ ಪದಾಧಿಕಾರಿಗಳಾದ ಶರದ್ ಬಾಂದೇಕರ, ಚಂದ್ರಕಾಂತ ನಾಯ್ಕ, ಅಶೋಕ ರಾಣೆ, ಚಂದ್ರಕಾಂತ ಹರಿಕಂತ್ರ, ಸುನೀಲ ತಾಮ್ಸೆ, ನರೇಶ ಹರಿಕಂತ್ರ, ಸುಧೀರ ನಾಯ್ಕ, ಸತೀಶ ಅಮದಳ್ಳಿ, ಇತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾರವಾರ</strong>: ‘ಇಡೀ ದೇಶ ಪಹಲ್ಗಾಮ್ ದಾಳಿಯ ನೋವಿನಲ್ಲಿರುವಾಗ ಕರಾವಳಿ ಉತ್ಸವ ಆಯೋಜಿಸುವುದು ಸರಿಯಲ್ಲ. ಹೀಗಾಗಿ ಉತ್ಸವ ರದ್ದುಪಡಿಸಬೇಕು’ ಎಂದು ಸನಾತನ ಧರ್ಮ ರಕ್ಷಣಾ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಗಜೇಂದ್ರ ನಾಯ್ಕ ಆಗ್ರಹಿಸಿದರು.</p>.<p>ಇಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪಹಲ್ಗಾಮ್ ದಾಳಿಯಲ್ಲಿ ಉಗ್ರರು ಹತ್ಯೆಗೈದಿರುವುದು ಪೈಶಾಚಿಕ ಕೃತ್ಯ. ದುರ್ಘಟನೆಯಲ್ಲಿ ರಾಜ್ಯದ ಮೂವರು ಮೃತಪಟ್ಟಿದ್ದಾರೆ. ಇದೊಂದು ಶೋಕದ ಸಮಯ. ಇಂತ ಸ್ಥಿತಿಯಲ್ಲಿ ಉತ್ಸವ ಆಯೋಜಿಸಿ ರಂಜಿಸುವುದು ಸರಿಯಲ್ಲ’ ಎಂದರು.</p>.<p>‘ಪಾಕಿಸ್ತಾನದ ಕುಮ್ಮಕ್ಕಿನಿಂದ ದಾಳಿ ನಡೆದಿರುವ ಸಾಧ್ಯತೆ ಇದೆ. ಈ ಕಾರಣಕ್ಕೆ ಕೇಂದ್ರ ಸರ್ಕಾರ ಯುದ್ಧ ಸಾರುವ ಸ್ಥಿತಿಯಲ್ಲಿದೆ. ಗಡಿಭಾಗದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ನೌಕಾನೆಲೆ ಇರುವ ಕಾರವಾರವೂ ಸೂಕ್ಷ್ಮ ಸ್ಥಳವಾಗಿರುವುದರಿಂದ ಇಲ್ಲಿ ಕಟ್ಟೆಚ್ಚರ ವಹಿಸಬೇಕು. ಹೀಗಾಗಿ ಜನರು ಹೆಚ್ಚು ಸೇರುವ ಉತ್ಸವ ಆಯೋಜಿಸಬಾರದು’ ಎಂದು ಆಗ್ರಹಿಸಿದರು.</p>.<p>‘ದೇಶದ ಸೈನಿಕರಿಗೆ ನೈತಿಕ ಸ್ಥೈರ್ಯ ತುಂಬಲು ಇಡೀ ಸಮಾಜ ಒಗ್ಗಟ್ಟಾಗಿ ನಿಲ್ಲಬೇಕು. ಸೇನೆಯ ವಿರುದ್ಧ ಟೀಕಿಸುವ ಕೆಲಸ ನಡೆಯಬಾರದು. ಸೈನಿಕರು ಪ್ರಾಣ ಒತ್ತೆ ಇಟ್ಟು ಹೋರಾಡುವ ಸ್ಥಿತಿಯಲ್ಲಿ ಉತ್ಸವ ಆಯೋಜಿಸಿ ಜನರು ರಂಜಿಸುವುದು ಸರಿಯಾಗದು’ ಎಂದರು.</p>.<p>ವೇದಿಕೆ ಪದಾಧಿಕಾರಿಗಳಾದ ಶರದ್ ಬಾಂದೇಕರ, ಚಂದ್ರಕಾಂತ ನಾಯ್ಕ, ಅಶೋಕ ರಾಣೆ, ಚಂದ್ರಕಾಂತ ಹರಿಕಂತ್ರ, ಸುನೀಲ ತಾಮ್ಸೆ, ನರೇಶ ಹರಿಕಂತ್ರ, ಸುಧೀರ ನಾಯ್ಕ, ಸತೀಶ ಅಮದಳ್ಳಿ, ಇತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>