ನಿವೇದಿತ್ಗೆ ಟಿಕೆಟ್ ಘೋಷಣೆಯಾಗುತ್ತಿದ್ದಂತೆ ಉಳಿದ ಆಕಾಂಕ್ಷಿಗಳು ಸಹಮತ ಎಂಬಂತೆ ‘ಮೌನ’ಕ್ಕೆ ಜಾರಿದ್ದರೂ ಪಕ್ಷ ಅವಕಾಶ ಕಲ್ಪಿಸಬಹುದು ಎಂಬ ನಿರೀಕ್ಷೆಯಲ್ಲಿದ್ದ ಶಾರದಾ ಶೆಟ್ಟಿ ಹಾಗೂ ಶಿವಾನಂದ ಹೆಗಡೆ ಕಡತೋಕಾ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದರು. ಅಲ್ಲದೆ ಕಾಂಗ್ರೆಸ್ ಪಾಲಿಗೆ ಕ್ಷೇತ್ರದಲ್ಲಿ ರೆಬೆಲ್ (ಬಂಡಾಯ) ಸಾರುವ ಎಚ್ಚರಿಕೆ ನೀಡಿದ್ದರು. ಈಗಾಗಲೆ ಶಾರದಾ ಶೆಟ್ಟಿ ನಾಮಪತ್ರ ಸಲ್ಲಿಸಿದ್ದು, ಶಿವಾನಂದ ಕೂಡ ಗುರುವಾರ ನಾಮಪತ್ರ ಸಲ್ಲಿಕೆ ಮಾಡುವುದಾಗಿ ಘೋಷಿಸಿದ್ದಾರೆ.