ಇದರಿಂದ ಬೇಸತ್ತ ಗ್ರಾಮಸ್ಥರು ಮಂಗಳವಾರ ಸಂಜೆ ಮಂಗನನ್ನು ಸೆರೆಹಿಡಿಯಲು ಪ್ರಯತ್ನಿಸಿದರು. ವನ್ಯಜೀವಿ ತಜ್ಞ ಅಶೋಕ ನಾಯ್ಕ ತದಡಿ, ಉರಗತಜ್ಞ ಮಹೇಶ ನಾಯ್ಕ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಹರಸಾಹಸ ಪಟ್ಟರು. ಹಲವು ಸರ್ಪ, ಚಿರತೆ, ಮಂಗ, ಮತ್ತಿತರ ಕಾಡು ಪ್ರಾಣಿಗಳ ರಕ್ಷಣಾ ಕಾರ್ಯಚರಣೆಯಲ್ಲಿ ಪಾಲ್ಗೊಂಡಿರುವ ಅಶೋಕ ನಾಯ್ಕ ಅವರು, ಈ ಒಂಟಿ ಮಂಗವನ್ನು ಹಿಡಿಯಲು ಯತ್ನಿಸಿದರು. ಅವರನ್ನು ಮೂರು ಬಾರಿ ಕಚ್ಚಿ ಗಾಯಗೊಳಿಸಿತು.