ಇದಕ್ಕೂ ಪೂರ್ವದಲ್ಲಿ ಡಾ.ವಿನಾಯಕ ಸುಬ್ರಹ್ಮಣ್ಯಂ, ಅವರ ಪುತ್ರಿ ವೈಷ್ಣವಿ ವಿನಾಯಕ ಅವರಿಂದ ಬಾನ್ಸುರಿ ವಾದನ ಪ್ರಸ್ತುತಗೊಳ್ಳಲಿದೆ. ಅವರಿಗೆ ನಾಗಪತಿ ಹೆಗಡೆ ಕಾಗೇರಿ ತಬಲಾ ಸಾಥ್ ನೀಡುವರು. ಕಾರ್ಯಕ್ರಮಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಲೆನಾಡು ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ, ಸುಷಿರ ಸಂಗೀತ ಪರಿವಾರ, ಸ್ವರಶ್ರೀ ಸಂಘಟನೆಗಳು ಸಹಕಾರ ನೀಡಿವೆ ಎಂದು ವಿ.ಪಿ.ಹೆಗಡೆ ವೈಶಾಲಿ ಹೇಳಿದರು. ಎಲ್.ಎಂ.ಹೆಗಡೆ, ಸತೀಶ ಹೆಗಡೆ ಗೋಳಿಕೊಪ್ಪ ಇದ್ದರು.