'ಅಂಗನವಾಡಿಯ ಹಿಂದೆ ಬಾವಿ ತೋಡುವ ಬಗ್ಗೆ ಸ್ಥಳೀಯ ಗ್ರಾಮ ಪಂಚಾಯಿತಿಯಿಂದ ಅನುಮತಿ ದೊರಕಿತ್ತು. ಬಾಲ ವಿಕಾಸ ಸಮಿತಿಯಲ್ಲೂ ಬಾವಿ ತೋಡುವ ಬಗ್ಗೆ ಠರಾವು ಮಾಡಲಾಗಿತ್ತು. ಜತೆಗೆ, ಬಾವಿ ತೋಡುತ್ತಿರುವ ಬಗ್ಗೆ ಅಧಿಕಾರಿಗಳಿಗೆ ತಿಳಿಸಲಾಗಿತ್ತು. ಆದರೆ, ಇದೀಗ ಇಲಾಖೆಗೆ ಪತ್ರ ಬರೆದು ಅನುಮತಿ ಪಡೆದುಕೊಂಡಿಲ್ಲ ಎಂಬ ಕಾರಣ ನೀಡಿ ಬಾವಿ ತೋಡಲು ಅಡ್ಡಗಾಲು ಹಾಕುತ್ತಿರುವುದು ಸರಿಯಲ್ಲ’ ಎಂದು ಅವರು ಹೇಳಿದರು.