ಲೋಕ ಕಲ್ಯಾಣಕ್ಕಾಗಿ ಸೆ.3ರಂದು ರಾಮಕ್ಷೇತ್ರದಲ್ಲಿ ಧರ್ಮ ಸಂಸದ್ ನಡೆಲಾಗುತ್ತಿದೆ. ದೇಶದ ಸುಮಾರು 2000 ಸಂತರು, 100ರಷ್ಟು ಮಠಾಧೀಶರು ಭಾಗಹಿಸಲಿದ್ದಾರೆ. ಎಲ್ಲ ಅಖಾಡಗಳು, ನಾಗ ಸಾಧುಗಳು, ಸೀತಾರಾಮ ಪರಂಪರೆ, ನಾಥ ಪಂಥ, ತ್ಯಾಗಿ, ಭೈರಾಗಿ ಇನ್ನಿತರ ಸನಾತನ ಹಿಂದೂ ಧರ್ಮದ ವಿವಿಧ ಪರಂಪರೆಗಳ ಆಚಾರ್ಯರು, ಮಹಾಮಂಡಲಾಧೀಶ್ವರರನ್ನು ಒಗ್ಗೂಡಿಸಿ, ರಾಷ್ಟ್ರೀಯ ಲೋಕ ಕಲ್ಯಾಣ ಮಂಚ್ ಸಂಸ್ಥೆ ಸ್ಥಾಪಿಸುವ ಉದ್ದೇಶ ಹೊಂದಲಾಗಿದೆ ಎಂದು ಸ್ವಾಮೀಜಿ ಹೇಳಿದರು. ಸಮುದಾಯದ ಪ್ರಮುಖರಾದ ಭೀಮಣ್ಣ ನಾಯ್ಕ, ಆರ್.ಜಿ.ನಾಯ್ಕ, ಶ್ರೀನಿವಾಸ ನಾಯ್ಕ ಇದ್ದರು.