ಮ್ಯಾರಥಾನ್ ಕರಪತ್ರವನ್ನು ಭಾನುವಾರ ಇಲ್ಲಿ ಬಿಡುಗಡೆಗೊಳಿಸಿದ ನಂತರ, ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ‘ಸಾರ್ವಜನಿಕರೆಲ್ಲರೂ ಕೈಜೋಡಿಸಿದಾಗ ನಗರದ ಸ್ವಚ್ಛತೆ ಕಾಪಾಡಿಕೊಳ್ಳಲು ಸಾಧ್ಯ. ನಗರಸಭೆ ಸೆ.24ರಿಂದ ಸ್ವಚ್ಛತಾ ಕಾರ್ಯಕ್ರಮ ಆರಂಭಿಸಿದ್ದು, ಸಿಬ್ಬಂದಿ, ಪೌರಕಾರ್ಮಿಕರೊಡಗೂಡಿ ವಿಕಾಸಾಶ್ರಮ, ಮುಸುಕಿನ ಬಾವಿ, ಜಲಶುದ್ಧೀಕರಣ ಘಟಕ, ಜಯನಗರ ಉದ್ಯಾನ ಮೊದಲಾದ ಕಡೆಗಳಲ್ಲಿ ಸ್ವಚ್ಛತೆ ನಡೆಸಿದೆ. ಅ.8ರವರೆಗೆ ಇದು ಮುಂದುವರಿಯಲಿದೆ. ತಾಲ್ಲೂಕು ಪಂಚಾಯ್ತಿಯು ಎಲ್ಲ ಗ್ರಾಮ ಪಂಚಾಯ್ತಿಗಳಲ್ಲಿ ಈ ಕಾರ್ಯಕ್ರಮ ಅನುಷ್ಠಾನಗೊಳಿಸಿದೆ’ ಎಂದರು.