ಇಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ ಎದುರಿಸುತ್ತಿರುವ ರವೀಶ ಹೆಗಡೆ, ಗಣೇಶ ಆಚಾರಿ, ಓಂ ಹೆಗಡೆ ಅವರನ್ನು ಪೊಲೀಸರು ಈವರೆಗೆ ವಶಕ್ಕೆ ಪಡೆದಿಲ್ಲ. ಆರೋಪಿಗಳನ್ನು ಬಂಧಿಸುವ ಬದಲು ಹೊಸ ಮಾರುಕಟ್ಟೆ ಠಾಣೆಯ ಎಸ್ಐ ರತ್ನಾ ಕುರಿ ಮೃತನ ಪತ್ನಿ ಮತ್ತು ಅತ್ತೆಯಿಂದ ಪ್ರಕರಣದ ದಿಕ್ಕು ತಪ್ಪಿಸುವ ರೀತಿಯಲ್ಲಿ ಹೇಳಿಕೆ ಪಡೆದುಕೊಂಡಿದ್ದಾರೆ. ಈ ಮೂಲಕ ಆರೋಪಿಗಳಿಗೆ ಜಾಮೀನು ಸಿಗಲು ಅವಕಾಶ ಮಾಡಿಕೊಡಲು ಯತ್ನಿಸಿರುವ ಶಂಕೆ ಮೂಡಿದೆ’ ಎಂದರು.