‘ಹುಯಿಲಮಿಡಿಯಲ್ಲಿ ಇಕೋ ಬೀಚ್ ಇದೆ. ನಿತ್ಯ ಇಲ್ಲಿರುವ ಸಸ್ಯಕಾಶಿ ಉದ್ಯಾನ, ಬೀಚ್ ನೋಡಿ ಆನಂದಿಸಲು ಜನರು ಆಗಮಿಸುತ್ತಾರೆ. ಆದರೆ ಇಲ್ಲಿಗೆ ತೆರಳುವ ರಸ್ತೆ ಸಂಪೂರ್ಣ ಹೊಂಡಮಯವಾಗಿ ವರ್ಷಗಳೇ ಕಳೆದಿದೆ. ಇದುವರೆಗೂ ಮರು ಡಾಂಬರೀಕರಣ ಮಾಡಿಲ್ಲ. ಕಳಪೆ ರಸ್ತೆಯಿಂದಾಗಿ ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯೂ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಸುಪ್ರಸಿದ್ದ ಕ್ಷೇತ್ರ ಸೋಡಿಗದ್ದೆಯ ಮುಂಭಾಗದ ಮುಲ್ಲಿಗದ್ದೆ ರಸ್ತೆ ಹೊಂಡಮಯವಾಗಿದ್ದು, ದುರಸ್ತಿ ಕಾರ್ಯ ನಡೆದಿಲ್ಲ. ಹಡೀನ್ ಭಾಗದ ಬಾಳೆಹಿತ್ಲು ಗ್ರಾಮ ರಸ್ತೆಯೂ ಹೊಂಡಮಯವಾಗಿದ್ದು ರಸ್ತೆ ಮರು ದುರಸ್ತಿಗೆ ಅನುದಾನ ನೀಡಿದ್ದು, ಕಾಮಗಾರಿ ಬಾಕಿ ಇದೆ’ ಎನ್ನುತ್ತಾರೆ ಸ್ಥಳೀಯರಾದ ನಾಗೇಂದ್ರ ನಾಯ್ಕ.