ಈಗ ಸತತ ಮಳೆಗೆ, ಇಲ್ಲಿನ ಜೀವನದಿಯಾದ ವರದಾ ತುಂಬಿ ಹರಿಯುತ್ತಿದೆ. ಮಳೆ ಮುಂದುವರಿದಲ್ಲಿ ನದಿಗೆ ಪ್ರವಾಹ ಬಂದು, ಸುತ್ತಲಿನ ಕೃಷಿ ಭೂಮಿಯನ್ನು ಆವರಿಸುತ್ತದೆ. ₹ 44.46 ಕೋಟಿ ವೆಚ್ಚದಲ್ಲಿ ವರದಾ ನದಿಯಿಂದ 34 ಕೆರೆಗಳಿಗೆ ನೀರು ತುಂಬಿಸುವ ಏತ ನೀರಾವರಿ ಯೋಜನೆಯ ಕಾಮಗಾರಿಗೆ ಕಳಪೆ ಸಾಮಗ್ರಿ ಬಳಸುತ್ತಿರುವ ಬಗ್ಗೆ ಆಕ್ಷೇಪ ವ್ಯಕ್ತವಾಗಿದೆ.