ಶಿರಸಿ: ಊರಿನ ನೀರಿನ ಬವಣೆ, ಒಣಗುತ್ತಿರುವ ತೋಟ, ವಿಫಲವಾಗುತ್ತಿ ರುವ ಕೊಳವೆ ಬಾವಿಗಳನ್ನು ಕಂಡ ರೈತರೊಬ್ಬರು ತಮ್ಮ ಮನೆಯ ಎದುರಿನ ಮಳೆಗಾಲ ನೀರಿನ ಗುಂಡಿಯನ್ನು ಕೆರೆಯಾಗಿ ಪರಿವರ್ತಿಸಿದ್ದಾರೆ. ತಾಲ್ಲೂಕಿನ ಬಿಸಲಕೊಪ್ಪ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಉಲ್ಲಾಳಕೊಪ್ಪದ ಕೃಷಿಕ ಎಸ್.ಜಿ. ಭಟ್ಟ ಅವರು ಎರಡು ವರ್ಷಗಳಿಂದ ನೀರಿನ ಬರ ಎದುರಿ ಸುತ್ತಿದ್ದರು. ಇಡೀ ಊರಿಗೆ ನೀರಿನ ಬರ ಎದುರಾಗಿರುವುದನ್ನು ಕಂಡ ಅವರು ಬರುವ ಮಳೆಗಾಲದಲ್ಲಿ ನೀರು ಸಂಗ್ರಹಿಸಬಹುದೆಂಬ ಉದ್ದೇಶದಿಂದ ಮನೆ ಎದುರಿನ ಹೊಟ್ಕೆರೆಯನ್ನು ವಿಸ್ತರಿಸಿ (ಬೆಟ್ಟದಿಂದ ಬರುವ ಮಳೆ ನೀರು ಸಂಗ್ರಹವಾಗುವ ಸ್ಥಳ) ಮುಕ್ಕಾಲು ಎಕರೆ ಪ್ರದೇಶದಲ್ಲಿ ಮಣ್ಣು ತೆಗೆದು ಕೆರೆ ಮಾಡಿದ್ದಾರೆ.