‘ನಿನ್ನೆ-ಮೊನ್ನೆಯಷ್ಟೇ ಬಿಜೆಪಿಗೆ ಸೇರಿದ ಪ್ರಸಾದ ಹೆಗಡೆ ಎಂಬಾತ ಪಕ್ಷದ ತಾಲ್ಲೂಕಿನ ಮಾಧ್ಯಮ ಪ್ರಮುಖನೆಂದು ಬಡಾಯಿ ಕೊಚ್ಚಿಕೊಳ್ಳುತ್ತ, ತಿಳಿವಳಿಕೆ ಕೊರತೆಯಿಂದ ಹೇಳಿಕೆ ನೀಡುತ್ತಿದ್ದಾರೆ. ವಾಸ್ತವ ಸ್ಥಿತಿ ಅರಿಯದೇ ಆಪಾದಿಸುವುದು ಸರಿಯಲ್ಲ. ಒಂದೊಮ್ಮೆ ಆಪಾದನೆ ನಿಜವಾಗಿದ್ದಲ್ಲಿ ದಾಖಲೆ ಸಹಿತ ಆಪಾದಿಸಲಿ’ ಎಂದು ವೇದಿಕೆ ಪ್ರಮುಖರಾದ ಗುರು ಹೆಬ್ಬಾರ, ಶಂಕರ ಹೆಗಡೆ, ಸತೀಶ ನಾಯ್ಕ, ಪ್ರಶಾಂತ ರಾವೋಜಿ, ಬಾಲಕೃಷ್ಣ ನಾಯ್ಕ ಪತ್ರಿಕಾ ಹೇಳಿಕೆಯಲ್ಲಿ ಸವಾಲು ಹಾಕಿದ್ದಾರೆ.